ಕೆಂಗಳ ದುರುಗಮ್ಮ ದೇವಿಯ ಮೂರ್ತಿಯ ವೈಭವದ ಮೆರವಣಿಗೆ.

ಕೊಟ್ಟೂರು ಜನೇವರಿ.16

12 ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಕೆಂಗಳ ದುರುಗಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಮಧ್ಯಾಹ್ನ ದುರುಗಮ್ಮ ದೇವಿಯ ವೈಭವದ ಉತ್ಸವ ಮೂರ್ತಿಯ ಮೆರವಣಿಗೆ ಯೊಂದಿಗೆ ಭಕ್ತರ ಸಡಗರ ಸಂಭ್ರಮಕ್ಕೆ ಅದ್ದೂರಿಯಾಗಿ ಚಾಲನೆ ಗೊಂಡಿತು.ಪಟ್ಟಣದ ಊರಮ್ಮನ ಬಯಲು ಪ್ರದೇಶದಿಂದ ಶ್ರೀ ದುರುಗಮ್ಮ ದೇವಿಯ ಮೂರ್ತಿಯ ಮೆರವಣಿಗೆ ಉರುಮೆ ಮತ್ತಿತರ ವಾದ್ಯಗಳೊಂದಿಗೆ ಭಕ್ತರ ಜಯ ಘೋಷಗಳೊಂದಿಗೆ ಮದ್ಯಾಹ್ನ 3.೦೦ ಸುಮಾರಿಗೆ ಆರಂಭ ಗೊಂಡಿತು, ತೊಟ್ಟಿಲಮಠ ಹಿರೇಮಠ, ಪಟ್ಟಣ ಪಂಚಾಯಿತಿ, ಹಳೇ ಕಟ್ಟಡ ರಸ್ತೆ ಗುಂಟಾ ಸಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕೊಟೇ ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಉಜ್ಜಿನಿ ಸರ್ಕಲ್ ಮೂಲಕ ಚಿರಿಬಿ ರಸ್ತೆಯ ಮೇಗೆರಿಯಲ್ಲಿನ ದೇವಸ್ಥಾನದತ್ತ ಮೆರವಣಿಗೆ ಸಾಗಿತು ಯುವಕರು ದೇವಿಯ ಉತ್ಸವ ಮೂರ್ತಿಯನ್ನು ಹೆಗಲಲ್ಲಿ ಹೊತ್ತು ಕೊಂಡು ಪರಸ್ಪರ ಕುಂಕುಮ ಮತ್ತಿತರಗಳನ್ನು ಹಚ್ಚಿಕೊಂಡು ಸಂಭ್ರಮಿಸಿದರು.ಮಾಜಿ ಸಚಿವ ಬಿ.ಶ್ರೀರಾಮುಲು .ಜಿ.ಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ವಾಲ್ಮೀಕಿ ಮುಖಂಡರುಗಳಾದ, ಬೆಣ್ಣಿಹಳ್ಳಿ ಅಂಜಿನಪ್ಪ,ಬಿ.ಎಸ್.ಆರ್.ಮೂಗಪ್ಪ, ರಂಗಪ್ಪ, ಕೋವಿ ನಾಗರಾಜ, ಸುಂಕದಕಲ್ಲು ನಾಗರಾಜ, ವೆಂಕಟೇಶ್, ಪ್ರಕಾಶ್, ರಾಮಣ್ಣ, ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button