ಕೊಂಡ್ಲಹಳ್ಳಿ ಭಾಗದ ಗ್ರಾಮಗಳಿಗೆ ಸಂವಿಧಾನದ ಪ್ರಕಾರ ಹಿಂದುಳಿದ ಗ್ರಾಮಗಳಿಗೆ ಶಿಕ್ಷಣಕ್ಕೆ ಹೆಚ್ಚು ಒಲವು ಕೊಡುತ್ತೇನೆ ಎಂದ ಶಾಸಕರು.

ಮೊಳಕಾಲ್ಮುರು ಜನೇವರಿ.18

ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕೊಂಡ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಪಿ.ಎಂ.ಶ್ರೀ ಯೋಜನೆ ಮತ್ತು ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಕೊಂಡ್ಲಹಳ್ಳಿ ದೊಡ್ಡ ಬಹಳ ಜನಸಂಖ್ಯೆ ಇರುವ ಗ್ರಾಮ ನನ್ನ ಸ್ವಂತ ಗ್ರಾಮ ಇದ್ದಹಾಗೆ ಇಲ್ಲಿನ ಶಿಕ್ಷಣದ ವ್ಯವಸ್ಥೆ ಸರಿಯಾದ ರೀತಿಯಿಂದ ನೋಡಿ ಕೊಳ್ಳಬೇಕು ಶಿಕ್ಷಣದಿಂದ ಪ್ರತಿಯೊಬ್ಬ ಮನೆಯಲ್ಲಿ ವಿದ್ಯಾವಂತರಾಗ ಬೇಕು ಇದೇ ನನ್ನ ಆಸೆ ಮತ್ತು ಕಾಲೇಜ್ ಸಹ ಇಲ್ಲಿ ನಿರೂಪಿಸ ಬೇಕು ಒಳ್ಳೆ ಶಿಕ್ಷಣ ಸಹ ಕಲ್ಪಿಸ ಬೇಕೆಂದು ನನ್ನ ನಿರ್ಧಾರ ಇದು ಬಹಳ ಹಿಂದುಳಿದ ಗ್ರಾಮ ಈ ಗ್ರಾಮಗಳಿಗೆ ಸರ್ಕಾರದಿಂದ ಸೌಲಭ್ಯ ಕಲ್ಪಿಸಲು ನಾನು ಮುಂದಾಗಿದ್ದೇನೆ.

ನನಗೆ ಏನಾದರೂ ಮಂತ್ರಿ ಪದವಿ ಏನಾದರೂ ಕೊಟ್ಟಿದ್ದರೆ ಇಡೀ ರಾಜ್ಯದಲ್ಲಿ ಆರನೇ ಗ್ಯಾರಂಟಿಯಾಗಿ ಶಿಕ್ಷಣಕ್ಕೆ ಒಂದು ಶಕ್ತಿ ಕೊಡುತ್ತಿದ್ದೆ ಆದರೂ ನಿಜವಾದಂತಹ ನ್ಯಾಯವಾಗಿ ನಡೆಯುತಕ್ಕಂತಹ ಶಾಸಕರ ಮೇಲೆ ಗಮನ ತೋರಿಸಲಿಲ್ಲ ಮತ್ತು ಸೀನಿಯರ್ ಜೂನಿಯರ್ ಎನ್ನದೆ ಮಂತ್ರಿ ಪದವಿಯನ್ನು ಕೊಟ್ಟಿರುತ್ತಾರೆ ನಾನು ಸುಮಾರು ಆರು ಬಾರಿ ಶಾಸಕರಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಬಡ ಜನರ ಏಳಿಗೆಗಾಗಿ ಕೆಲಸ ಮಾಡಿದ್ದೇನೆ ಒಟ್ಟು ಏಳು ಬಾರಿ ಶಾಸಕರಾದರು ಕೂಡ ನನಗೆ ಮಂತ್ರಿ ಪದವಿ ದೊರಕಲಿಲ್ಲ ನಾನು ಬರೀ ಜನ ಸಾಮಾನ್ಯರ ಕೆಲಸಗಳನ್ನು ರೂಪಿಸಿ ಕೊಂಡು ಬಂದಿರುತ್ತೇನೆ.

ಸರ್ಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಟ್ಟಿದ್ದೇನೆ ಅದೇ ನನ್ನ ಜೀವನ ನಾನು ಯಾವತ್ತಿಗೂ ನ್ಯಾಯದ ಮಾರ್ಗವಾಗಿ ನ್ಯಾಯದ ಹಾದಿಯಲ್ಲಿ ಹೋಗುತ್ತಿದ್ದೇನೆ ಇದು ನಂದು ಕೊನೆ ಚುನಾವಣೆ ಅಂದರೂ ಕೂಡ ಪಕ್ಷದವರು ಮಂತ್ರಿ ಪದವಿ ಬಗ್ಗೆ ಧ್ವನಿ ಯೆತ್ತಲಿಲ್ಲ ನಾನು ಯಾವತ್ತಿಗೂ ಆಳುವಂತ ಸರ್ಕಾರಗಳಿಗೆ ಗೌರವ ತಂದು ಕೊಟ್ಟಿದ್ದೇನೆ ಯಾವ ಕ್ಷೇತ್ರದಲ್ಲಿ ಆಗಲಿ ನಾನು ಒಳ್ಳೆ ಯೋಜನೆಗಳು ಅಭಿವೃದ್ದಿಗಳ ರೂಪಿಸಿದ್ದೇನೆ ಇದೇ ನನ್ನ ಕಾಯಕ ಎನ್ನುವ ಶಾಸಕರುಶಿಕ್ಷಣ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಮುಖಂಡರು ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button