ಮೊಳಕಾಲ್ಮುರು ಪಟ್ಟಣದ ಭಾಗ್ಯ ಜ್ಯೋತಿ ನಗರದಲ್ಲಿ ಆರೋಗ್ಯ ಕ್ಲಿನಿಕ್ ಗೆ ಚಾಲನೆ ನೀಡಿದ ಶಾಸಕರು.
ಮೊಳಕಾಲ್ಮುರು ಜನೇವರಿ.18

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ಪಟ್ಟಣದ ಭಾಗ್ಯ ಜ್ಯೋತಿ ನಗರದಲ್ಲಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ನಮ್ಮ ಜನ ಸಾಮಾನ್ಯರಿಗೆ ಬಡವರಿಗೆ ಸಿಗುವ ಆರೋಗ್ಯ ಭಾಗ್ಯ ಮಹತ್ವದ್ದು ಸರ್ಕಾರದಿಂದ ಬರುವ ಯಾವುದೇ ಸೌಲಭ್ಯವನ್ನು ಅನುಕೂಲ ಮಾಡಿ ಕೊಡುತ್ತೇನೆ ನಾನು ಎಂದು ಶಾಸಕರು ಮಾತನಾಡಿದರು.

ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮೊಳಕಾಲ್ಮೂರು ತಾಲೂಕಾ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಅಧಿಕಾರಿಗಳು ಮತ್ತು ತಹಸಿಲ್ದಾರ್ ರೂಪ ಮೇಡಂ ತಾಲೂಕಾ ಗುತ್ತಿಗೆದಾರರಾದ ಖಾದರ್ ಇವರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ದೀಪ ಹಚ್ಚಿದರು ಈ ಮೂಲಕ ಕ್ಲಿನಿಕ್ ಉದ್ಘಾಟನೆ ನೆರವೇರಿಸಿದರು. ಮಾನ್ಯ ಶಾಸಕರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಟ್ಟಣ ಪಂಚಾಯತ್ ಸದಸ್ಯರು ಮುಖಂಡರು ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು