ಮರಬ ಸತೀಶಗೆ ಪಿ.ಎಚ್.ಡಿ ಪದವಿ ಪ್ರಧಾನ.
ಮರಬ ಜನೇವರಿ.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ ಗ್ರಾಮದ ದಲಿತ ಯುವಕನಿಗೆ ಪ್ರತಿಭಾವಂತ ಪದವೀಧರರಾದ ಹೆಚ್. ಸತೀಶರವರಿಗೆ ಜ.10 ರಂದು ಜರುಗಿದ ನುಡಿ ಹಬ್ಬ ಕಾರ್ಯಕ್ರಮದಲ್ಲಿ, ಕನ್ನಡ ಹಂಪಿ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪ್ರಧಾನ ಮಾಡಲಾಗಿದೆ. ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಸಮಾಜ ವಿಜ್ಞಾನಗಳ ನಿಕಾಯಗಳ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಹೆಚ್.ಸತೀಶರವರು. ಮೈಸೂರು ಕುವೆಂಪು ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ, ಅರ್ಥಶಾಸ್ತ್ರ ವಿಷಯದ ಪ್ರಧ್ಯಾಪಕರಾದ ಡಾ”ಪುಟ್ಟರಾಜ್ ರವರ ಮಾರ್ಗ ದರ್ಶನದಲ್ಲಿ ಸಲ್ಲಿಸಿದ. “ಗೃಹ ಕೈಗಾರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟುಗಳು” ಎಂಬ ವಿಷಯಕ್ಕೆ ಸಲ್ಲಿಸಿದ ಮಹಾ ಪ್ರಬಂಧಕ್ಕೆ. ಜ 10.ರಂದು ಕನ್ನಡ ವಿಶ್ವ ವಿದ್ಯಾಲಯ ದಿಂದ ಡಾ”ಸತೀಶರವರಿಗೆ , (ಡಾಕ್ಟರ್ ಆಫ್ ಫಿಲಾಸಫಿ) ಪಿ.ಎಚ್.ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.ಈ ಗೌರವನ್ನೂ ಸತೀಶ್ ನ ಸ್ನೇಹಿತರು ಗ್ರಾಮದ ಅನೇಕ ಮುಖಂಡರು ಹಾಗೂ ದಲಿತ ಸಂಘಟನೆಯ ಮುಖಂಡರು ಬಂಧು ಬಳಗದವರು ಶುಭಾ ಹಾರೈಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ