ಅಯೋಧ್ಯೆಯ ಶ್ರೀರಾಮ…..

ಅಯೋಧ್ಯೆಯಲ್ಲಿ ಜನಿಸಿದ ದೇವ ಪುರುಷನೇ

ರಾಮಲಲ್ಲಾ ಆಗಿ ಮತ್ತೆ ಜನಿಸಿದಾತನೇ

ಅರಳಿದ ಕಮಲದ ಮೇಲೆ ನಿಂತು

ಮುಗುಳ್ನಗುವಾತನೇ

ನಿಂತಿರುವ ಬಂಗಿಯ ಸಾಕ್ಷಾತ್ ಶಿವನೇ

ಅರುಣ್ ಯೋಗಿರಾಜರವರ ನಿರ್ಮಾಣದಲಿ

ವಿಷ್ಣುವಿನ ದಶಾವತಾರಗಳ ಚಿತ್ತಾರದ

ಚೆಲುವಿನಲಿ

ಪರಶುರಾಮ ಕೃಷ್ಣ ಬುದ್ಧ ಭಗವಾನ್

ಜೊತೆಯಲಿ

ಅಯೋಧ್ಯಯ ಕೀರ್ತಿ ಹೆಚ್ಚಿತು ನಿಮ್ಮ

ಪ್ರತಿಷ್ಠಾನದಲಿ

ಭೂಮಿಯ ಮೇಲಿನ ಮೊದಲ ಅವತಾರನೇ

ರಾಜ ದಶರಥ ರಾಣಿ ಕೌಶಲ್ಯರ ಸುಪುತ್ರನೇ

ಭರತ ಲಕ್ಷ್ಮಣ ಶತ್ರುಘ್ನರ ಪ್ರೀತಿಯ

ಸಹೋದರನೇ

ಸೀತಾ ಮಾತೆಯ ಹೃದಯದ ಆರಾಧಕನೇ

ಬಹುದಿನದ ಕನಸು ಶ್ರೀ ರಾಮನ ಮಂದಿರ

ಲೋಕವೇ ಕಾದು ಕುಳಿತಿದೆ ಹೃದಯದಿ ಕಾತುರ

ಸರಯು ನದಿಯ ತೀರದಲಿ ಭಕ್ತ ಜನ ಸಾಗರ

ರಘುವಂಶದ ಶ್ರೀ ರಾಮನ ನೋಡಲು ಜನ್ಮ

ಸಾಕ್ಷಾತ್ಕಾರ

ಕೋಟಿ ಕೋಟಿ ದೀಪಗಳ ಮಧ್ಯೆಗಳಲಿ

ರಾಮ ಜಪವ ಮಾಡಿ ಭಕ್ತಿ ಭಾವದಲಿ

ಅಯೋಧ್ಯೆಯ ಮಂತ್ರಾಕ್ಷತೆ ಪೂಜಿಸಿ

ಮನೆಮನೆಗಳಲಿ

ಶ್ರೀ ರಾಮನು ನೆಲೆಸುವನು ನಿಮ್ಮ ಮನ

ಮನಗಳಲಿ

ಶ್ರೀ ಮುತ್ತು.ಯ.ವಡ್ಡರ

ಶಿಕ್ಷಕರು ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button