ತೆವರಟ್ಟಿ ಗ್ರಾಮದಲ್ಲಿ ರಾಮ-ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು.
ತೆವರಟ್ಟಿ ಜನೇವರಿ.23

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆವರಟ್ಟಿ ಗ್ರಾಮದ ಪಾಟೀಲ ತೋಟದ ಹನುಮಾನ ಮಂದಿರದಲ್ಲಿ ರಾಮ ಪ್ರತಿಷ್ಠಾಪನೆ ನಿಮಿತ್ಯ ರಾಮನಿಗೆ ಹಾಗೂ ಹನುಮಾನ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಅನ್ನಪ್ರಸಾದ ದಿಪೋತ್ಸವ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮದಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ವಿವಿದೊದ್ದೇಶ ಸಂಘದ ನಿರ್ದೇಶಕ ಭೀಮಗೌಡಾ ನಾಯಿಕ ಭಾಗವಹಿಸಿ ಹಿಂದು ಧರ್ಮದ ಪ್ರತೀಕವಾಗಿರುವ ಅಯೋಧ್ಯ ರಾಮಮಂದಿರಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಜರಗಿರುವದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.ದೇವರ ಹಾಗೂ ದೇಶಕ್ಕಾಗಿ ಹೋರಾಡಿದ ಮಹನೀಯರ ವಿಷಯದಲ್ಲಿ ರಾಜಕೀಯ ಮತ್ತು ಜಾತೀಯತೆ ಮಾಡದೆ ಎಲ್ಲರು ಒಂದಾಗಿ ಆಚರಣೆ ಮಾಡುವದೇ ಉತ್ತಮ ಎಂದು ಮಾತನಾಡಿದರು.ಎಲ್ಲಾ ಸಮಾಜದ ಹಾಗೆ ಪಂಚಮ ಸಾಲಿ ಸಮಾಜ ಸಂಘಟನಾತ್ಮಕವಾಗಿ ಬಲಿಷ್ಠ ಆಗಬೇಕು ಎಂದು ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ ನಾಯಿಕ, ಸಿದ್ದನಗೌಡ ಪಾಟೀಲ, ರಾಜು ನಾಯಿಕ ಸಂತೋಷ ನಾಯಿಕ, ಸಂತೋಷ ಪಾಟೀಲ, ಬಸನಗೌಡಾ ಪಾಟೀಲ, ಶ್ಯಾಮರಾವ್ ಪಾಟೀಲ, ರಾವಸಾಬ ಪಾಟೀಲ,ಬಿ ಆರ್ ಪಾಟೀಲ,ಸಿದನಗೌಡಾ ಪಾಟೀಲ,ಪ್ರೇಮಕುಮಾರ ನಾಯಿಕ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ