ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾದ ಕರ ಸೇವಕರಿಗೆ ಸತ್ಕಾರ ಮತ್ತು ಸ್ಮರಣೆ – ಗಚ್ಚಿನಮಠ.

ಹುನಗುಂದ ಜನೇವರಿ.23

ಅಖಂಡ ಬಿಜಾಪೂರ ಜಿಲ್ಲೆಯಿಂದ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಸಾಕಷ್ಟು ಹೋರಾಟದಲ್ಲಿ ಹುನಗುಂದ ತಾಲೂಕಿನ ಅನೇಕ ಕರ ಸೇವಕರು ಭಾಗಿಯಾಗಿದ್ದರು ಎಂದು ಗಚ್ಚಿನಮಠದ ವೇ.ಮೂ.ಮಹಾಂತಯ್ಯ ಗಚ್ಚಿನಮಠ ಹೇಳಿದರು. ಪಟ್ಟಣದ ವಿಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡ ಅಯೋಧ್ಯೆ ರಾಮಮಂದಿರ ಅನಾವರಣ ಮತ್ತು ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ಅಂಗವಾಗಿ ಪ್ರಭು ಶ್ರೀರಾಮಚಂದ್ರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು,ಹಿಂದೂ ಧರ್ಮದ ೯೦ ಸಾವಿರ ವರ್ಷಗಳ ಇತಿಹಾಸವಿದೆ.ಮಹರ್ಷಿ ವಾಲ್ಮೀಕಿಯವರ ರಾಮಾಯಣ ಜಗತ್ತಿಗೆ ಶ್ರೀರಾಮಚಂದ್ರರ ಆದರ್ಶ ಜೀವನವನ್ನು ಕೊಡಮಾಡಿದೆ ಎಂದರು.ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ ಯುದ್ದೋಪಾದಿಯಲ್ಲಿ ನಡೆದಂತ ಅಯೋಧ್ಯೆಯ ಸಂಕಟದ ಸಾರ್ಥಕದ ಅನುಭವನ್ನು ಇಂದು ನನಸಾಗಿದೆ. ಆ ಕರ್ಕಶದ ಅನುಭವವನ್ನು ಮತ್ತು ಅನುಭವಿಸಿದ ನೋವಿಗೆ ಪ್ರಭು ಶ್ರೀರಾಮಲಲ್ಲಾ ಪ್ರಾಣ ಪ್ರತಿ಼ಷ್ಠಾಪಿವಾದದ್ದು ಇತಿಹಾಸದಲ್ಲಿ ದಾಖಲೆಯಾಗಿದೆ. ಈ ಸಂಭ್ರಮವನ್ನು ಪಕ್ಷಾತೀತ ಮತ್ತು ಜಾತ್ಯಾತೀತ ಮನೋಭಾವದಿಂದ ಸಂಭ್ರಮಿಸೋಣ ಎಂದರು.ಇದೇ ವೇಳೆ ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಭಾಗಿಯಾದ ಪಟ್ಟಣದ ಕರ ಸೇವಕರಾದ ಬಸವರಾಜ ಕಂಠಿ,ಮಲ್ಲಿಕಾರ್ಜುನ ದರಗಾದ,ಬಸವರಾಜ ಕಮ್ಮಾರ,ನಿಂಗಪ್ಪ ಅಂಟರತಾನಿ,ಬಸಪ್ಪ ಹೊಸೂರ,ಪರಶುರಾಮ ವಡ್ಡರ,ರಾಮಣ್ಣ ವಡ್ಡರ,ಅಮರಪ್ಪ ಹೂಗಾರ ಇವರನ್ನು ಗೌರವಿಸಲಾಯಿತು.ಇನ್ನು ಮೃತ ಕರ ಸೇವಕರಾದ ಅಂದಾನೆಪ್ಪ ಬ್ಯಾಳಿ,ವೀರಪ್ಪ ಕಡ್ಲಿಮಟ್ಟಿ,ಮುರುಗೇಶ ರೇವಡಿ,ಪರಮಾನಂದ ಬಿರಾದಾರ, ಹನಮಂತಪ್ಪ ಚಿಂತಕಲದಿನ್ನಿ,ದುರಗಪ್ಪ ಮಾದರ, ಶೇಖರಯ್ಯ ಸಾರಂಗಮಠ ಮಲ್ಲಪ್ಪ ಐಹೊಳೆ ಇವರುಗಳನ್ನು ಸ್ಮರಿಸಲಾಯಿತು. ಮುಖಂಡರಾದ ರಾಜಕುಮಾರ ಬಾದವಾಡಗಿ,ಅರುಣ ದುದ್ಗಿ,ಬಾಬು ನಾಗರಾಳ,ವೀರೇಶ ಕುರ್ತಕೋಟಿ,ಅಮರೇಶ ಹಳಪೇಟಿ,ಮಹಾಂತೇಶ ಹಳ್ಳೂರ,ಮಂಜು ಆಲೂರ,ಮಹೇಶ ಬೆಳ್ಳಿಹಾಳ,ಮಲ್ಲು ಚೂರಿ,ವೀರನಗೌಡ ದಾದ್ಮಿ,ಮಹಾಂತೇಶ ಚಿತ್ತವಾಡಗಿ,ಸಂಗಮೇಶ ಎತ್ತಿನಮನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button