ಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ತಹಶೀಲ್ದಾರ್ ಪಟ್ಟಣ ರೌಂಡ್ಸ್ – ಬಸ್ ನಿಲ್ದಾಣದ ಮುಂದೆ ಟ್ರಾಫಿಕ್ ಆಗದಂತೆ ಕ್ರಮ ಕೈಗೊಳ್ಳಿ.
ದೇವರ ಹಿಪ್ಪರಗಿ ಜನೇವರಿ.23

ದೇವರಹಿಪ್ಪರಗಿ ಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ತಹಶೀಲ್ದಾರ್ ಪ್ರಕಾಶ ಸಿಂದಗಿ ಪಟ್ಟಣ ರೌಂಡ್ಸ್ ಹಾಕಿ ರಸ್ತೆ ಪಕ್ಕದಲ್ಲಿರುವ ಗಾಢ ಅಂಗಡಿಗಳನ್ನು ತೆರವುಗೊಳಿಸಿದರು ಹಾಗೂ ಪಟ್ಟಣ ಪಂಚಾಯತಿ ಕಾರ್ಮಿಕರು ನಗರದ ಸ್ವಚತೆಗೆ ಒತ್ತು ನೀಡಿ ಎಂದು ಹೇಳಿದರು ತದನಂತರ ಕೆಲವು ಟಿ ಪಾಯಿಂಟ್ಗಳಿಗೆ ಭೇಟಿ ನೀಡಿ ಚಹಾದ ಕಪಗಳನ್ನು ರಸ್ತೆಯ ಮೇಲೆ ಬಿಸಾಕದ ಹಾಗೆ ನೋಡಿಕೊಳ್ಳಿ ಎಂದು ಕಡಕ ಎಚ್ಚರಿಕೆ ನೀಡಿದರು. ಹಾಗೂಬಸ್ ನಿಲ್ದಾಣದ ಕಾಮಗಾರಿ ಹಾಗೂ ಸ್ವಚತೆಯ ಬಗ್ಗೆ ಪರಿಶೀಲನೆ ನಡೆಸಿದರು.ಪೋಲಿಸರಿಗೆ ಬಸ್ ನಿಲ್ದಾಣದ ಮುಂದೆ ಟ್ರಾಫಿಕ್ ಆಗದಂತೆ ಕ್ರಮಕೈಗೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳದೇವರ ಹಿಪ್ಪರಗಿ