ಹೊಸಹಳ್ಳಿ ನಾಡ ಕಚೇರಿಯಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧನೆ.

ಕಾನಾ ಹೊಸಹಳ್ಳಿ ಜನೇವರಿ.25

ಇಲ್ಲಿನ ನಾಡ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸಿಬ್ಬಂದಿ ವರ್ಗ, ಮುಖಂಡರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಈ ವೇಳೆ ಕಂದಾಯ ಪರಿವೀಕ್ಷಕ ಮುರಳಿ ಕೃಷ್ಣ ಮಾತನಾಡಿ ಮತದಾನವು ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯವಾಗಿದ್ದು ಸರಕಾರವು ಸದರಿ ದಿನಾಚರಣೆಯನ್ನು ಆಚರಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ನಾಡ ಕಚೇರಿ ಮಹಿಳಾ ಸಿಬ್ಬಂದಿ ಅನಿತಾ ಪೂಜಾರ್, ಮುಖಂಡರಾದ ಕುಲಮೆಹಟ್ಟಿಟಿ.ವೆಂಕಟೇಶ್, ಗ್ರಾ‌.ಪಂ ಸದಸ್ಯ ಮಣ್ಣವರ ಹೊನ್ನೂರ ಸ್ವಾಮಿ, ಬಿಸ್ನಹಳ್ಳಿ ಸಾಂಬಶಿವ ದಳವಾಯಿ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆಎಸ್ ವೀರೇಶ್, ಕುಂಬಾರ್ ಹನುಮಂತಪ್ಪ, ಸಣ್ಣ ನಾಗರಾಜ್, ತಾಯಕನಹಳ್ಳಿ ನಾಗರಾಜ್, ನಾಡಕಚೇರಿ ಸಿಬ್ಬಂದಿ ಸಿದ್ದೇಶ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button