ಮಹಿಳಾ ಶಕ್ತಿ ದೇಶದ ಶಕ್ತಿ — ವಿ.ಎಲ್. ಚಿತ್ಕೋಟೆ.

ಹರಾಳ ಜುಲೈ.18

ಮಹಿಳಾ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ಈ ದೇಶದ ಪ್ರಧಾನ ಮಂತ್ರಿಗಳು ಅಂಚೆ ಇಲಾಖೆಯ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ಪ್ರಪ್ರಥಮವಾಗಿ ಬಳ್ಳಾರಿ ವಿಭಾಗದ ಕೂಡ್ಲಿಗಿ ಉಪ ವಿಭಾಗದ ಕೊಟ್ಟೂರಿನ ಹರಾಳ ಗ್ರಾಮವು ಸಂಪೂರ್ಣ ಮಹಿಳಾ ಸಮ್ಮಾನ್ ಗ್ರಾಮ ಆಗಿರುವುದು ನಮ್ಮ ಬಳ್ಳಾರಿ ವಿಭಾಗಕ್ಕೆ ಒಂದು ಹೆಮ್ಮೆಯ ವಿಷಯ ಎಂದು ಬಳ್ಳಾರಿಯ ವಿಭಾಗದ ಅಂಚೆ ಅಧೀಕ್ಷಕರಾದ ವಿ ಎಲ್ ಚಿತ್ಕೋಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಹರಾಳು ಗ್ರಾಮದಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪತ್ರ 190 ಖಾತೆಗಳನ್ನು ತೆರೆಯುವ ಮೂಲಕ ಇಡೀ ಗ್ರಾಮವೇ ಸಂಪೂರ್ಣ ಮಹಿಳಾ ಸಮ್ಮಾನ್ ಗ್ರಾಮ ಆಗಿರುತ್ತದೆ,

ಹಾಗೂ ಬಳ್ಳಾರಿ ವಿಭಾಗದಲ್ಲಿ 4000 ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಖಾತೆಗಳನ್ನು ತೆರೆಯುವ ಮೂಲಕ ಉಳಿದ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು, ಕೂಡ್ಲಿಗಿ ಉಪಯೋಗದ ಅಂಚೆ ನಿರೀಕ್ಷಕರಾದ ಬಾರಿಕರ ರಾಜಪ್ಪನವರು ಮಾತನಾಡುತ್ತಾ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಖಾತೆಗಳನ್ನು ತೆರೆಯುವುದರ ಮೂಲಕ ಮಹಿಳೆಯರು ತಮ್ಮ ಜೀವನದ ಭದ್ರತೆಯನ್ನು ಇನ್ನಷ್ಟು ಭದ್ರಗೊಳಿಸಲು ಮುಂದಾಗುತ್ತಿದ್ದಾರೆ ಹಾಗೂ ಇದರಿಂದ ಅಂಚೆ ಇಲಾಖೆಯೂ ಸುಭದ್ರವಾಗಿರುತ್ತದೆ ಎಂದರು, ಮತ್ತು ಅಂಚೆ ಇಲಾಖೆಯಲ್ಲಿರುವ ಎಲ್ಲಾ ವಿಧದ ಖಾತೆಗಳನ್ನು ಹಾಗೂ ಉಪಯೋಗಗಳನ್ನು ಸವಿಸ್ತಾರವಾಗಿ ಹರಳು ಗ್ರಾಮಸ್ಥರಿಗೆ ತಿಳಿಸಿದರು, ವೇದಿಕೆ ಮೇಲೆ ಉಪಸ್ಥಿತರಿದ್ದ ಮುಖ್ಯ ಗುರುಗಳಾದ ಈಶ್ವರಪ್ಪ ತುರ್ಕಣಿಯವರು ಉಳಿತಾಯ ಎಂದ ಕೂಡಲೇ ನೆನಪಿಗೆ ಬರುವುದು ಅಂಚೆ ಇಲಾಖೆ, ಎರಡು ಶತಮಾನಗಳ ಇವರ ಸೇವೆ ಅಮೋಘ, ಪ್ರತಿ ಹಳ್ಳಿಗಳಲ್ಲಿಯೂ ಅಂಚೆ ಇಲಾಖೆ ಇರುವುದರಿಂದ ದೇಶದ ಕಟ್ಟಕಡೆಯ ವ್ಯಕ್ತಿಯು ಕೂಡ ಉಳಿತಾಯ ಮಾಡಲು ತುಂಬಾ ಅನುಕೂಲವಾಗುತ್ತದೆ ಎಂದರು, ಅಂಚೆ ಅಧೀಕ್ಷಕರಾದ ವಿ ಎಲ್ ಚಿತ್ಕೋಟೆ ಅಧ್ಯಕ್ಷತೆಯನ್ನು ವಹಿಸಿದ್ದರು, ಕೂಡ್ಲಿಗಿ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಬಾರಿಕರ ರಾಜಪ್ಪ , ಬಳ್ಳಾರಿಯ ವಿಭಾಗದ ಅಂಚೆ ವಿಮೆಯ ಅಭಿವೃದ್ಧಿ ಅಧಿಕಾರಿ ಮಾರುತಿ,ಮುಖ್ಯ ಗುರುಗಳಾದ ಈಶ್ವರಪ್ಪ ತುರ್ಕಾಣಿ, ಕೊಟ್ಟೂರು ಅಂಚೆಪಾಲಕರಾದ ರಾಜಶೇಖರವರು ವೇದಿಕೆ ಮೇಲೆ ಉಪಸ್ಥಿತರಿದ್ದರು ಕೆ ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ರಾಂಪುರದ ಗ್ರಾಮೀಣಾ ಅಂಚೆ ಪಾಲಕ ಹನುಮಂತಪ್ಪ ಸ್ವಾಗತಿಸಿದರು, ಹರಳು ಗ್ರಾಮೀಣ ಅಂಚೆಪಾಲಕರಾದ ಪೃಥ್ವಿ ವಂದಿಸಿದರು, ಹರಾಳಿನ ಗಣ್ಯರು ಪ್ರಮುಖರು ಫಲಾನುಭವಿಗಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button