ಡಿ.ಎಚ್.ಆರ್.ವಿ & ಎಸ್.ಐ.ಓ ದಿಂದ ಸಂವಿಧಾನದ ಅರಿವು ಮತ್ತು ಇಂದಿನ ಅಗತ್ಯತೆ ಜಾಗೃತಿ ಕಾರ್ಯಕ್ರಮ.
ಇಲಕಲ್ಲ ಜನೇವರಿ.27
![](https://i0.wp.com/sknewskannada.in/wp-content/uploads/2024/01/IMG-20240127-WA00381-1024x548.jpg?resize=708%2C379&ssl=1)
ಇಲಕಲ್ಲ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ 75.ನೇ ಗಣರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ(SIO) ಮತ್ತು ಡಾ. ಬಿ.ಆರ್ ಅಂಬೇಡ್ಕರ್ ದಲಿತ ಹಿತ ರಕ್ಷಣಾ ವೇದಿಕೆ ಜಂಟಿ ಸಹಯೋಗದಲ್ಲಿ “ಸಂವಿಧಾನದ ಅರಿವು ಮತ್ತು ಇಂದಿನ ಅಗತ್ಯತೆ” ಎಂಬ ವಿಷಯದಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಎಸ್.ಐ.ಓ(SIO) ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಗಣರಾಜ್ಯೋತ್ಸವ ದಿನದಂದು ಸಂವಿಧಾನವನ್ನು ಅರಿತು ಅದರ ಆಶಯಗಳನ್ನು ಸಾಕಾರ ಗೊಳಿಸುವ ಪ್ರಯತ್ನವಾಗಲಿ ಎಂದು ಆಶಿಸಿದರು ಹಾಗೂ ವಿದ್ಯಾರ್ಥಿ – ಯುವಜನರಲ್ಲಿ ಸಂವಿಧಾನ ಬಗೆಗೆ ಪ್ರೇಮ, ಗೌರವ ಬೆಳೆಸುವ ಕೆಲಸವು ಅತ್ಯಂತ ತುರ್ತಾಗಿ ಆಗಬೇಕು, ಆಗಾದಾಗ ಮಾತ್ರ ಸಂವಿಧಾನದ ಮಹತ್ವದ ಜೊತೆಗೆ ಅದನ್ನು ಉಳಿಸುವ ಬದ್ಧತೆ ಬೆಳೆಯುತ್ತದೆ ಎಂದು ಹೇಳಿದರು.
![](https://i0.wp.com/sknewskannada.in/wp-content/uploads/2024/01/IMG-20240127-WA00391-1024x732.jpg?resize=708%2C506&ssl=1)
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಉಸ್ಮಾನ್ ಗನಿ ಉಮ್ನಾಬಾದ ಮಾತನಾಡಿ ನಾವೆಲ್ಲರೂ ಜೊತೆಗೂಡಿ ನಮ್ಮ ಹಿರಿಯರು ಬಯಸಿದ ನಾಡನ್ನು ಕಟ್ಟಲು ಒಂದಾಗೋಣ ಎಂದು ಕರೆ ಕೊಟ್ಟರು, ಇನ್ನೋರ್ವ ಅತಿಥಿಯಾದ ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ ಮಾತನಾಡಿ, ಸಂವಿಧಾನದ ರಚನೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಂಯಮ, ತ್ಯಾಗ ಮತ್ತು ಅವರ ಹೋರಾಟದ ಬದುಕನ್ನು ವಿವರಿಸಿದರು.
![](https://i0.wp.com/sknewskannada.in/wp-content/uploads/2024/01/IMG-20240127-WA00361-1024x768.jpg?resize=708%2C531&ssl=1)
ಅಧ್ಯಕ್ಷೀಯ ಭಾಷಣ ಮಾಡಿದ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶರಣಪ್ಪ ಆಮದಿಹಾಳ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಸಂವಿಧಾನವನ್ನು ನಾವೇಕೆ ತಿಳಿಯಬೇಕು ಮತ್ತು ಅದು ನಮ್ಮ ಬದುಕಿನಲ್ಲಿ ಎಷ್ಟೊಂದು ಮಹತ್ವದ್ದು ಎಂಬುದನ್ನು ತಿಳಿಸಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುವಿಕೆಯನ್ನು ತೊಡೆದು ಹಾಕಲು ಶಿಕ್ಷಣ, ಹೋರಾಟ ಹಾಗೂ ಸಂಘಟನೆ ಕುರಿತು ಜನರಿಗೆ ತಿಳಿ ಹೇಳಿದರು.ಈ ಕಾರ್ಯಕ್ರಮವನ್ನು ಗಪ್ಪಾರ್ ತಹಸಿಲ್ದಾರ್ ನಡೆಸಿದರು, ಎಸ್.ಐ.ಓ ವಿದ್ಯಾರ್ಥಿ ಸಂಘಟನೆ ಸ್ಥಾನೀಯ ಅಧ್ಯಕ್ಷರಾದ ಆಸಿಫ್ ಹುಣಚಗಿ ಮತ್ತು ಪದಾಧಿಕಾರಿಗಳು, ಜಮಾಅತೆ ಇಸ್ಲಾಮಿ ಹಿಂದ್ ನ ಕಾರ್ಯಕರ್ತರು, ಅಂಬೇಡ್ಕರ್ ಕಾಲೋನಿಯ ಬಂಧುಗಳು ಹಾಗೂ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಅಬ್ಬು ಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್ಲ