“ಶಿವಯೋಗಿ ಶ್ರೀ ಸಿದ್ದರಾಮೇಶ್ವರ” ಚಲನ ಚಿತ್ರದ ಟೀಸರ್ ಬಿಡುಗಡೆ.

ಬೆಂಗಳೂರು ಜನೇವರಿ.28

ಓಂಕಾರ್ ಮೂವ್ಹೀಸ್ ರವರ ಶ್ರೀಮತಿ ಸುಜಾತ ರಾಜ್‌ಕುಮಾರ್ ಅರ್ಪಿಸುವ ಪುರುಷೋತ್ತಮ್ ಓಂಕಾರ್‌ ಸ್ವಾಮಿಯವರ ನಿರ್ದೇಶನದ “ಶಿವಯೋಗಿ ಶ್ರೀಸಿದ್ಧರಾಮೇಶ್ವರ” ಕನ್ನಡ ಭಕ್ತಿ ಪ್ರಧಾನ ಚಲನ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಮಾಡಲಾಯಿತು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ 851.ನೇ ಜಯಂತೋತ್ಸವದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿಎಂ ಸಿದ್ಧರಾಮಯ್ಯನವರು ಈ ಚಿತ್ರದ ಬಗ್ಗೆ ಶುಭವನ್ನು ಕೋರಿದರು.

ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲ ತಾಲೂಕಿನ ಯುವ ಪ್ರತಿಭೆ ರಾವಣ ಕತ್ತಿಯವರು ಸಿದ್ಧರಾಮೇಶ್ವರನಾಗಿ ಅಭಿನಯಿಸಿದ್ದಾರೆ . ಸತತವಾಗಿ ನಾಲ್ಕು ತೆಲುಗು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿರುವ ರಾವಣ ಕತ್ತಿ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಸಿದ್ಧರಾಮೇಶ್ವರ ಪಾತ್ರದ ಮೂಲಕ ಕಾಣಿಸಿ ಕೊಂಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಆಗಿಹೋದ ಶರಣ ಸಿದ್ಧರಾಮೇಶ್ವರರ ಪವಾಡಗಳನ್ನು ಜನ ಸಾಮಾನ್ಯರಿಗೂ ತಲುಪಿಸ ಬೇಕೆನ್ನುವ ಉತ್ಕಟತೆಯಿಂದ ಎನ್ ಎಸ್ ರಾಜಕುಮಾರ್ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು, ಸಹ ನಿರ್ಮಾಪಕರಾಗಿ ಸುನಿಲ್‌ಕುಮಾರ್ ಎನ್ನುವವರು ಕೈಜೋಡಿಸಿದ್ದಾರೆ.

ಚಿತ್ರದಲ್ಲಿ ಎರಡು ಹಾಡುಗಳು ಹಾಗೂ 4. ವಚನಗಳಿದ್ದು ಚಿತ್ರಕ್ಕೆ ಸಂಗೀತ ಸಂಯೋಜನೆ ರಾಜ್‌ಭಾಸ್ಕರ್ ಮಾಡಿದ್ದಾರೆ. ಛಾಯಾಗ್ರಹಣ ಗೌರಿ ವೆಂಕಟೇಶ್, ಚಿತ್ರದ ಎಡಿಟಿಂಗ್ , ಕಲರ್ ಕರೆಕ್ಷನ್ ಹಾಗೂ ಗ್ರಾಫಿಕ್ಸ್ ಆರ್ ಅನಿಲ್‌ಕುಮಾರ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ. ತಾರಾಗಣದಲ್ಲಿ ರಾವಣ ಕತ್ತಿ, ಗಣೇಶ್‌ರಾವ್ ಕೇಸರಕರ್, ನಾಗೇಂದ್ರ ಅರಸು , ಬಸವರಾಜ್ , ಕಾವ್ಯಗೌಡ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರ್ ರಾವಣರಂಭ ಟಿವ್ಹಿ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು ಅತಿ ಶೀಘ್ರದಲ್ಲಿ ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದಲ್ಲಿ ಬಹಳಷ್ಟು ಗ್ರಾಫಿಕ್ಸ್ ನ್ನು ಸಂದರ್ಭಕ್ಕನುಸಾರವಾಗಿ ಬಳಸಲಾಗಿದೆ ಎಂದು ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ತಿಳಿಸಿದ್ದಾರೆ.

*****

ವರದಿ:-ಡಾ.ಪ್ರಭು ಗಂಜಿಹಾಳ

ಮೊ:-9448778346

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button