ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.
ಹುನಗುಂದ ಜನೇವರಿ.28

ಶ್ರೀ ಮಾತಾ ಎಜ್ಯುಕೇಶನಲ್ & ರೂರಲ್ ಡೆವಲಪಮೆಂಟ್ ಟ್ರಸ್ಟ್ನ, ಎಸ್.ಎಸ್.ಕಡಪಟ್ಟಿ ಇಂಟರನ್ಯಾಶನಲ್ ಪಬ್ಲಕ್ ಸ್ಕೂಲ್ ಹುನಗುಂದದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವು ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನವನ್ನು ಅಲಂಕರಿಸಿದ ಪರಮ ಪೂಜ್ಯ ಶ್ರೀ ಡಾ|| ಬಸವಲಿಂಗ ಮಹಾಂತ ಸ್ವಾಮಿ, ಶಿವಯೋಗ ಮತ್ತು ನಿಸರ್ಗ ಚಿಕಿತ್ಸ ಕೇಂದ್ರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ತೀರ್ಥ ಶಿರೂರು, ಇವರು ಬಸವಣ್ಣನವರ ಸಾಂಸ್ಕೃತಿಕ ನಾಯಕ, ವಚನ, ಕಾಯಕ, ಅರಿವು ಬೆಳೆಸಿ ಕೊಳ್ಳಬೇಕು. ಕಾಯಕ ಮಹತ್ವ ಯೋಗ ವಿದ್ಯೆ ಆಧ್ಯಾತ್ಮ ವಿಷಯಗಳ ಬಗ್ಗೆ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸಂಯುಕ್ತ. ಎಸ್. ಪಾಟೀಲ್ ನಿರ್ದೇಶಕರು ವಿ.ಡಿ.ಸಿ.ಸಿ ಬ್ಯಾಂಕ್ ವಿಜಯಪುರ ಇವರು ಥಾಮಸ್ ಆಳ್ವಾ ಎಡಿಸನ್ ಅವರ ಕಥೆಯನ್ನು ಅಂದರೆ ವಿದ್ಯಾರ್ಥಿಗಳು ಮುಂದೆ ಏನಾಗುತ್ತದೆ ಎನ್ನುವುದರ ಜೊತೆಗೆ ಪ್ರತಿಯೊಬ್ಬ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಎಂದು ಹೇಳಿದರು. ಸನ್ಮಾನಿತರಾಗಿ ಆಗಮಿಸಿದ ಶ್ರೀ ಎಸ್. ಪಿ. ಕೆಂಗನಾಳ ನಿವೃತ್ತ ಉಪನ್ಯಾಕರು. ಸಿ.ವಿ.ಸಿ ಪಾಲಿಟೆಕ್ನಿಕ್, ಹುನಗುಂದ ಇವರು ಪ್ರತಿಬಿಂಬ, ಅನುಕರಣೆ, ಹಾಗೂ ಪ್ರಯೋಗದ ಬಗ್ಗೆ ವಿವರಿಸಿದರು. ಇನ್ನೋವರು ಸನ್ಮಾನಿತರಾದ ಶ್ರೀ ಎಮ್.ಎಮ್ ಬಡಿಗೇರ ನಿವೃತ್ತ ಉಪನ್ಯಾಸಕರು ಸಿ.ವಿ.ಸಿ ಪಾಲಿಟಿಕನಿಕ್ ಹುನಗುಂದ, ಶೀ ಎ.ಬ.ಹುಲ್ಲಳ್ಳಿ ನಿವೃತ್ತ ಉಪನ್ಯಾಸಕರು ಸಿ.ವಿ.ಸಿ ಪಾಲಿಟಿಕನಿಕ್ ಹುನಗುಂದ ಮತ್ತು ಶ್ರೀ ವಿಜಯ ಎಸ್. ಸಿಂಗಶೆಟ್ಟಿ ಕೋರಿಯೋಗ್ರಾಫಿಕ, ಡಾನ್ಸ ಕರ್ನಾಟಕ ಡಾನ್ಸ ಪ್ಠೆನಲಿಸ್ಟ. ಹಾಗೂ ಶ್ರೀ ಬಸವರಾಜ ಎಸ್ ಕಡಪಟ್ಟಿ ಮ್ಯಾನೆಜಿಂಗ್ ಟ್ರಸ್ಟಿ ಶ್ರೀ ಮಾತಾ ಎಜ್ಯುಕೇಶನಲ್ & ರೂರಲ್ ಡೆವಲಪಮೆಂಟ್ ಟ್ರಸ್ಟ್ ಹುನಗುಂದ ಹಾಗೇ ಶ್ರೀಮತಿ ಲತಾ ಬಸವರಾಜ ಕಡಪಟ್ಟಿ ಹುನಗುಂದ ವೇದಿಕೆ ಮೇಲೆ ಉಪಸ್ಥಿತರಾಗಿದ್ದರು. ವೇದಿಕೆಯ ಮೇಲೆ ಆಸೀನರಾದ ಗಣ್ಯರಿಂದ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು, ನಂತರ ಶ್ರೀ ದವಲ್ ಜಾಲಿಹಾಳ್ ವಾರ್ಷಿಕ ವರದಿಯನ್ನು ಓದಿದರು. ಬೆಸ್ಟ್ ಸ್ಟೂಡೆಂಟ ಪ್ರಶಸ್ತಿ ಗಣ್ಯರಿಂದ ವಿತರಿಸಲಾಯಿತು. ಉತ್ತಮ ಡಾನ್ಸ್ ಪ್ರಶಸ್ತಿ ಮತ್ತು ಚಿತ್ರಕಲಾ ಪ್ರಶಸ್ತಿಗಳನ್ನು ಕೊಡಲಾಯಿತು. ಮುಖ್ಯ ಅತಿಥಿಗಳು ಮತ್ತು ಸನ್ಮಾನಿತರಾಗಿ ಆಗಮಿಸಿದ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಮತ್ತು ಕಳೆದ ಶಾಲೆಗೆ 1೦ ನೇಯ ತರಗತಿಯಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲಕರು, ಶಿಕ್ಷಕರು, ಮತ್ತು ಶಿಕ್ಷಕೇತರ ವರ್ಗದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ