ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮ.

ಹೊಸಪೇಟೆ ಜನೇವರಿ.29

ಧರ್ಮಸ್ಥಳ ಸಂಸ್ಥೆಯೊಂದಿಗೆ ಕೈಜೋಡಿಸಿ ಯಾವುದೇ ಸರ್ಕಾರವು ಮಾಡದಂತಹ ಅದ್ಭುತವಾದ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದೆ ಧರ್ಮಸ್ಥಳ ಸಂಸ್ಥೆಯು ಒಂದು ಸಾಗರವಿದ್ದಂತೆ ಲೆಕ್ಕವಿಲ್ಲದಷ್ಟು ಜನಪರ ಕಾರ್ಯಕ್ರಮಗಳನ್ನು ನಾವು ನೋಡಿದ್ದೇವೆ. ಹೊಸಪೇಟೆ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಯಿತು ಈ ಕಾರ್ಯಕ್ರಮವನ್ನು ಶ್ರೀ ತಾಯಮ್ಮ ಶಕ್ತಿ ಸಂಸ್ಥೆ ಹೊಸಪೇಟೆ ಇದರ ನಿರ್ದೇಶಕರಾದ ಶ್ರೀಮತಿ ಕವಿತಾ ಈಶ್ವರ್ ಸಿಂಗ್ ಅವರು ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಡಾಕ್ಟರ್ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರು ಶಿವ ಪಾರ್ವತಿ ಸ್ವರೂಪದವರು ದೇಶದಲ್ಲಿ ಯಾವುದೇ ಸಂಘ ಸಂಸ್ಥೆಗಳು ಮಾಡಿದಂತಹ ಅದ್ಭುತವಾದ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದೆ ಮಹಿಳೆಯರ ಅಭಿವೃದ್ಧಿ ಕೇವಲ ಧರ್ಮಸ್ಥಳ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳು ಶ್ರೀ ಸತೀಶ್ ಶೆಟ್ಟಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತೃಶ್ರೀ ಹೇಮಾವತಿ ಅಮ್ಮನವರು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಮಹಾ ದಾಸೆಯಿಂದ ತಮ್ಮ ಅಧ್ಯಕ್ಷತೆಯಲ್ಲಿ ಜ್ಞಾನ ವಿಕಾಸ ಎಂಬ ಕಾರ್ಯಕ್ರಮವನ್ನು ಹುಟ್ಟು ಹಾಕಿದ್ದಾರೆ ಈ ಕಾರ್ಯಕ್ರಮವನ್ನು ಜನರಿಗೆ ತಲುಪಿಸಲಿ ಎಂದೇ ಕರ್ನಾಟಕದ 265 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 265 ಜ್ಞಾನವಿಕಾಸ ಸಮನ್ವಧಿಕಾರಿಗಳನ್ನು ನೇಮಿಸಲಾಗಿದೆ ಮಹಿಳೆಯರು ಮುಕ್ತವಾಗಿ ಎಲ್ಲಾ ವಿಚಾರಗಳನ್ನು ಸಮನ್ವಯಧಿಕಾರಿಗಳಲ್ಲಿ ಹಂಚಿ ಕೊಳ್ಳಬಹುದಾಗಿದೆ ಸಂಪನ್ಮೂಲ ವ್ಯಕ್ತಿಗಳುಡಾ// ಸುಲೋಚನಾ ಎಸ್ ಡಿ ( ನಿವೃತ್ತ ವೈದ್ಯರು )( ವಿಷಯ ಕುಟುಂಬದಲ್ಲಿ ಮಹಿಳೆಯರ ಪಾತ್ರ) ಕುಟುಂಬವನ್ನು ನಿರ್ವಹಿಸುವ ಕಲೆ ಹೆಣ್ಣಿಗೆ ಮಾತ್ರ ಗೊತ್ತು, ಕೂಲಿ ನಾಲಿ ಮಾಡಿ ತಂದೆಯು ಕುಟುಂಬವನ್ನು ಆರ್ಥಿಕವಾಗಿ ಸದೃಢ ಮಾಡಿದರೆ ಕುಟುಂಬದಲ್ಲಿ ತಾಯಿಯ ಪ್ರೀತಿ, ವಾಸ್ತಲ್ಯ, ಸಂಸ್ಕಾರ,ಉಪಚಾರ, ಕುಟುಂಬ ನಿರ್ವಹಣೆ, ಇದು ಒಂದು ಹೆಣ್ಣಿನ ಜವಾಬ್ದಾರಿಯಾಗಿರುತ್ತದೆ, ಮಹಿಳೆಯು ತನ್ನ ಕುಟುಂಬಕ್ಕೆ ತಾನೇ ಮಹಾ ರಾಣಿಯಾಗಿರುತ್ತಾಳೆ, ಧರ್ಮಸ್ಥಳ ಸಂಸ್ಥೆಯು ಮಹಿಳೆಯರಿಗೆ ಅ ಆ ಇ ಈ ಕಲಿಸುವ ಮೊದಲ ಶಾಲೆಯಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿಗಳು ಶ್ರೀಮತಿ ಶ್ವೇತಾಂಬರಿ ಎಸ್ ಪಿ ( ಹಿರಿಯ ವಕೀಲರು)( ವಿಷಯ ಮಹಿಳೆಯರಿಗೆ ಕಾನೂನಿನ ಅರಿವು) ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಧರ್ಮಸ್ಥಳ ಸಂಸ್ಥೆಯ ಪ್ರಯತ್ನ ಎಲ್ಲರೂ ಮೆಚ್ಚುವಂತಹದ್ದು ಹಿಂದಿನಗಿಂತಲೂ ಇಂದಿಗೆ ಮಹಿಳೆಯ ಸ್ಥಿತಿಗತಿ ತುಂಬಾ ಉತ್ತಮವಾಗಿದೆ ಧರ್ಮಸ್ಥಳ ಸಂಸ್ಥೆಯು ಬಂದಮೇಲೆ ಸಮಾಜದಲ್ಲಿ ಮಹಿಳೆಯರಿಗೂ ಕೂಡ ಸ್ಥಾನಮಾನ ಸಿಗುವಂತಾಗಿದೆ ಕಾನೂನಿಗೆ ಮಹಿಳೆ ಮತ್ತು ಪುರುಷರೆಂಬ ಭೇದಭಾವ ಇರುವುದಿಲ್ಲ ಕಾನೂನಿನ ಮುಂದೆ ಎಲ್ಲರೂ ಒಂದೇ ಪ್ರತಿ ಮಹಿಳೆಯೂ ಕೂಡ ಕಾನಿನನ ಅರಿವು ಪಡೆದು ಕೊಳ್ಳಬೇಕು ಎಂದರು ಇದೇ ಸಂದರ್ಭದಲ್ಲಿ ಸ್ವಸಹಾಯ ಸಂಘದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಕ್ರಿಯೆ ಕೂಡ ನಡೆಯಿತು. ಅಧ್ಯಕ್ಷತೆ ಶ್ರೀಮತಿ ಗೀತಾ ಶಂಕರ್ – ಮಾಜಿನಗರ ಸಭಾ ಸದಸ್ಯರು ನಿಮಗೆ ಸಮಾಜಕ್ಕೆ ಏನಾದರು ಒಳ್ಳೆದ ಮಾಡ ಬೇಕೆಂಬ ಮಹಾದಾಸೆ ಇದ್ದರೆ ಇವತ್ತು ನಾನು ವೇದಿಕೆಯ ಮೇಲೆ ನಿಂತು ಮಾತನಾಡುವುದಕ್ಕೂ ಧರ್ಮಸ್ಥಳ ಸಂಸ್ಥೆಯ ಕಾರಣ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ಆಯ್ದ ಸಾಧಕ ಸದಸ್ಯರಿಗೆ ಗುರುತಿಸಿ ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಪ್ರದರ್ಶನ, CSC ಕಾರ್ಯಕ್ರಮಗಳ ಪ್ರದರ್ಶನ, ಕಾರ್ಯಕ್ರಮದ ಕೊನೆಯಲ್ಲಿ ಸದಸ್ಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಮಾರುತಿ ಎಸ್ ಗೌಡ ಅವರು ಸ್ವಾಗತಿಸಿದರು ತಾಲೂಕಿನ ಕೃಷಿ ಅಧಿಕಾರಿ ಚೆನ್ನಪ್ಪ ಗಣಿ ನಿರೂಪಿಸಿದರು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಖಾ ವಂದಿಸಿದರು. ಮೇಲ್ವಿಚಾರಕರಾದ ವಿನುತಾ, ನಂದನ್ ಕುಮಾರ್, ರಂಜನ, ರಾಘವೇಂದ್ರ, ಮಂಜುನಾಥ, ಶರಣಬಸವ ಹಾಗೂ ಜ್ಞಾನವಿಕಾಸ ಕೇಂದ್ರಗಳ ಎಲ್ಲಾ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button