ಕಾನಾ ಹೊಸಹಳ್ಳಿಯಲ್ಲಿ ಸಂವಿಧಾನ ಜನ ಜಾಗೃತಿ ಅಭಿಯಾನದ ವಾಹನಕ್ಕೆ ಚಾಲನೆ.
ಕಾನಾ ಹೊಸಹಳ್ಳಿ ಜನೇವರಿ.29
![](https://i0.wp.com/sknewskannada.in/wp-content/uploads/2024/01/IMG-20240129-WA0007-1024x576.jpg?resize=708%2C398&ssl=1)
ಸಂವಿಧಾನ ದಿನಾಚರಣೆ ಪ್ರಯುಕ್ತ ಜಿಲ್ಲಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವಿಜಯನಗರ ಮತ್ತು ಕೂಡ್ಲಿಗಿ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಕಾನಹೊಸಹಳ್ಳಿ ಪಟ್ಟಣದಲ್ಲಿ ಸಂವಿಧಾನ ಜನ ಜಾಗೃತಿ ಅಭಿಯಾನದ ಸ್ತಬ್ಧ ಚಿತ್ರದ ವಾಹನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ ಚೇತನ್ ಚಾಲನೆ ನೀಡಿದರು. ಸಂವಿಧಾನ ದುರ್ಬಲ ಗೊಳಿಸಲು ಹವಣಿಸುತ್ತಿರುವವರಿಗೆ ಸಂವಿಧಾನ ಜಾಗೃತಿಯಿಂದ ಉತ್ತರ ನೀಡಬಹುದು. ಸಂವಿಧಾನ ರಕ್ಷಣೆ ಎಂದರೆ ಜನರ ರಕ್ಷಣೆಯಾಗಿದೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲಾಗುವುದು ಎಂದು ತಾಲೂಕು ಸಹಾಯಕ ನಿರ್ದೇಶಕ ಜಗದೀಶ್ ದಿಡಗೂರು ಹೇಳಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕರು ಫಕೀರಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ ಬಸಮ್ಮ, ಉಪಾಧ್ಯಕ್ಷರು ನೇತ್ರಾವತಿ ಮಂಜುನಾಥ್, ಡಿಎಸ್ಎಸ್ ಸಂಘದ ತಾಲೂಕ ಅಧ್ಯಕ್ಷ ಟಿ ಗಂಗಣ್ಣ, ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷ ಕೃಷ್ಣಪ್ಪ ಗುಣಸಾಗರ, ಹೊಸಹಳ್ಳಿ ನಾಗೇಶ್, ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ಶಾಲೆಯ ಶಿಕ್ಷಕರು, ಪೊಲೀಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ