ಪಡಿತರ ಚೀಟಿಯಲ್ಲಿ ಗೋಲ್ಮಾಲ್ ನ್ಯಾಯ ಬೆಲೆ ಅಂಗಡಿ ಸಿಬ್ಬಂದಿ ಅಕ್ಕಿ ನೀಡಿದೆ ವಂಚನೆ.
ಹೊಸಪೇಟೆ ಜನೇವರಿ.30

ದಿನಾಂಕ:29/01/23 ರಂದು ವಿಜಯನಗರ ಜಿಲ್ಲೆ. ಹೊಸಪೇಟೆ ತಾಲೂಕು, ಕಾಕುಬಾಳು ಗ್ರಾಮದಲ್ಲಿ ಸರಕಾರಿ ನ್ಯಾಯ ಬೆಲೆ ಅಂಗಡಿ ನಡೆಸುತ್ತಿರುವ ಬೈಲುವದ್ದಿಗೇರಿ ಗ್ರಾಮದ ಹೆಚ್. ಮಾರೆಮ್ಮ ಇವರು ನ್ಯಾಯ ಬೆಲೆ ಅಂಗಡಿಯನ್ನು ನಡೆಸುತ್ತಿದ್ದದು. ಸುಮಾರು ಎರಡು ವರ್ಷಗಳಿಂದ ಪಡಿತರ ವಿತರಣೆ ಸರಿಯಾಗಿ ಆಗುತ್ತಿಲ್ಲ. ಮತ್ತು ಸುಮಾರು 6 ತಿಂಗಳಿಂದ 800 ಕಾರ್ಡ್ ನಲ್ಲಿ ಕೇವಲ 400 ಕಾರ್ಡ್ಗೆ ಆಹಾರ ವಿತರಣೆ ಮಾಡುತ್ತಿದ್ದು, ಅತ್ಯಂತ ಕಡು ಬಡತನ ದಿಂದ ಬಳಲುತ್ತಿರುವ ಜನರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತಾರೆ. ನಮಗೆ ತಿನ್ನಲಿಕ್ಕೆ ಅಕ್ಕಿ ಸಿಗುತ್ತಿಲ್ಲ ಎಂದು ಜನರು 3 ರಿಂದ 4 ದಿನಗಳವರೆಗೂ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಡುವ ಪರಿಸ್ಥಿತಿಯು ನಿರ್ಮಾಣ ಮಾಡಿದ್ದಾರೆ. ಮತ್ತು 3-4 ದಿನಗಳ ಕಾಲ ಅಲೆದಾಡಿದರು ಸಹ ನಮಗೆ ಅಕ್ಕಿ ದೊರೆಯುವುದಿಲ್ಲ. ಮತ್ತು ನಮ್ಮ ಹತ್ತಿರ ಹೆಬ್ಬೆಟ್ಟನ್ನು ತೆಗೆದುಕೊಂಡು ಮೋಕನ್ನ್ನು ಕೊಟ್ಟ ನಂತರ ನಾವು 3-4 ದಿನಗಳ ನಂತರ ಅಕ್ಕಿ ತೆಗೆದುಕೊಳ್ಳಲು ಹೋದರೆ ಆಗ ಅಕ್ಕಿ ಖಾಲಿ ಆಗಿದೆ ಎಂದು ನಮಗೆ ತಿಳಿಸುತ್ತಾರೆ. ಆದರೆ ನಾವು ಕೊಟ್ಟಂತಹ ಹೆಬ್ಬೆಟ್ಟಿಗೆ ನಮ್ಮ ಅಕ್ಕಿಯು ಬಂದಿದ್ದು, ಆ ಅಕ್ಕಿ ಎಲ್ಲಿ ಹೋಗುತ್ತದೆ. ಒಟ್ಟು 100 ರಿಂದ 150 ಜನರಿಗೆ ಪ್ರತಿ ತಿಂಗಳು ಅಕ್ಕಿಯೇ ಸಿಗುತ್ತಿಲ್ಲ. ಅವರುಗಳು ವಾಪಾಸ್ ಹೋಗುತ್ತಿದ್ದಾರೆ. ಇದನ್ನು ನಾವು ಕೇಳಲು ಹೋದಾಗ ನಾನು ಅದನ್ನು ಮುಂದಿನ ತಿಂಗಳು ಕೊಡುತ್ತೇನೆಂದು ಹೇಳುತ್ತಾರೆ. ಆದರೆ ಆ ತಿಂಗಳು ಸಹಿತ ಅಕ್ಕಿಯನ್ನು ಕೊಡುವುದಿಲ್ಲ. ತಾವುಗಳು ಮತ್ತು ಕಾಕುಬಾಳು ಗ್ರಾಮದ ಆಹಾರ ನಿರೀಕ್ಷಕರು ದಯಮಾಡಿ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆಯನ್ನು ಮಾಡಿ ಸೂಕ್ತ ಕ್ರಮ ತೆಗೆದುಕೊಂಡು ಬಡ- ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಪ್ರತಿ ತಿಂಗಳು ಅಕ್ಕಿಯು ಬಡ ಜನರಿಗೆ ಸರಿಯಾದ ರೀತಿಯಲ್ಲಿ ದೊರೆಯುವ ಹಾಗೆ ವ್ಯವಸ್ಥೆಯನ್ನು ಮಾಡಿ ಕೊಡಬೇಕೆಂದು ಮಾನ್ಯ ಶಾಸಕರು ಎಚ್ ಆರ್ ಗವಿಯಪ್ಪ ಅವರಿಗೆ ಹಾಗೂ ತಾಲೂಕು ಆಫೀಸ್ ಗೆ ಮನವಿ ಪತ್ರ ನೀಡಲಾಯಿತು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ