ಕಾರಣಿಕ ಯುಗಪುರುಷ ಪರಮ ತಪೋನಿಧಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳವರ 88.ನೇ ವರ್ಷದ ಪುಣ್ಯ ಸ್ಮರಣೋತ್ಸವ.
ಕೊಟ್ಟೂರು ಜನೇವರಿ.30
![](https://i0.wp.com/sknewskannada.in/wp-content/uploads/2024/01/IMG-20240130-WA0044-678x1024.jpg?resize=678%2C1024&ssl=1)
ಉಜ್ಜಿನಿಯ ಶ್ರೀಮದ್ ಉಜ್ಜಯಿನಿ ಜಗದ್ಗುರು ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಪೂಜ್ಯ ಶ್ರೀ ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳವರ 134.ನೇ ಜಯಂತೋತ್ಸವ ಹಾಗೂ 88.ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಸೋಮವಾರ ಶ್ರೀ ಪೀಠದಲ್ಲಿ ನಡೆಯಿತು.
![](https://i0.wp.com/sknewskannada.in/wp-content/uploads/2024/01/IMG-20240130-WA0045-1024x678.jpg?resize=708%2C469&ssl=1)
ಶ್ರೀ ಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉಜ್ಜಿಯಿನಿ ಮತ್ತು ಒಂಬತ್ತು ಪಾದಗಟ್ಟೆಗಳ ಸದ್ಭಕ್ತರು ಹಾಗು ಕೊಟ್ಟೂರಿನ ಕಟ್ಟೇಮನೆ ದೈವಸ್ಥರು ಮತ್ತು ಪುಣ್ಯ ಸ್ಮರಣೋತ್ಸವ ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಮುಂಜಾನೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಜಂಗಮ ಗಣರಾಧನೆ, ಮಧ್ಯಾಹ್ನ ಲಿಂಗೈಕ್ಯ ಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು