ಮೊರಬ:ಸಮಾಜ ಸೇವೆಯಿಂದ ಸಂತೃಪ್ತಿ – ಅಬ್ದುಲ್ ರೆಹಮಾನ್.
ಮೊರಬ ಜನೇವರಿ.31
![](https://i0.wp.com/sknewskannada.in/wp-content/uploads/2024/01/IMG-20240130-WA0062-1024x442.jpg?resize=708%2C306&ssl=1)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದಲ್ಲಿ, ಸಮಾಜ ಸೇವಕ ಅಬ್ದುಲ್ ರಹಿಮಾನ್ ರವರ ನೇತೃತ್ವದಲ್ಲಿ. ಜ 30.ರಂದು ಸ್ನೇಹಿತರ ಬಳಗದಿಂದ ಸತತ 7.ನೇ ವರ್ಷದ ಸಮಾಜ ಸೇವಾರ್ಥ, “ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರ” ಆಯೋಜಿಸಲಾಗಿತ್ತು. ಶಿಬಿರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹೆಮಾನ್ ರವರು ಮಾತನಾಡಿದರು. ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ ದೊರಕಲಿದೆ, ಇದು ಸ್ನೇಹಿತರ ಬಳಗದ ದೇಯೋದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಸತತ ಏಳನೇ ವರ್ಷಗಳಿಂದ ಶ್ರಮಿಸುತ್ತಿದೆ, ಅದಕ್ಕೆಲ್ಲಾ ಸಮಸ್ತ ಸ್ನೇಹಿತರ ಬಳಗದ ಸರ್ವ ಸದಸ್ಯರ ಶ್ರಮದಾನವೇ ಕಾರಣವಾಗಿದೆ. “ಸರ್ವೇ ಜನಃ ಸುಖೀನೋ ಭವಂತು” ಎಂಬ ಧೇಯ ದೊಂದಿಗೆ, ಸ್ನೇಹಿತರ ಬಳಗ ಸನಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದೆ ಎಂದರು.
![](https://i0.wp.com/sknewskannada.in/wp-content/uploads/2024/01/IMG-20240130-WA0061.jpg?resize=708%2C392&ssl=1)
ನೇತ್ರಲಕ್ಷ್ಮಿ ವೈದ್ಯಾಲಯ ಡಾಕ್ಟರ್ ದೇಶಪಾಂಡೆ, ಹಾಗೂ ಸ್ನೇಹಿತರ ಬಳಗದ ಉಪಾಧ್ಯಕ್ಷ ಬಿ ಖಾದರ್ ಭಾಷಾ, ಸದಸ್ಯರಾದ ಅಬ್ದುಲ್ ವಾಹಿದ್, ಆಲಂ ಭಾಷ, ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕ, ಎನ್.ಎಸ್.ಎಸ್ ವಿಭಾಗದ ಅಧಿಕಾರಿ ಜಗದೀಶ್, ಪ್ರಾಂಶುಪಾಲರಾದ ಸುರೇಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ಣ, ಫೈರೋಜ್ ಆಲಂ, ಮೌಲ್ವಿ ಸಾಬ್, ಗ್ರಾಮ ಪಂಚಾಯ್ತಿ ಸದಸ್ಯ ಮೆಹಬೂಬ್ ಬಾಷಾ, ಗ್ರಾಮ ಪಂಚಾಯಿತಿ ಸದಸ್ಯ ಚನ್ನಬಸಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಹೊನ್ನೂರವಲಿ, ಮೊರಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ, ಜನಪ್ರತಿನಿಧಿ ಕೊಟ್ರೇಶ್ ಉಪಸ್ಥಿತರಿದ್ದರು. 110 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆ ಗೆ ಅಯ್ಕೆ ಮಾಡಲಾಯಿತು. ಒಟ್ಟು 230 ಜನರು ತಪಾಸಣೆ ಮಾಡಿ, ಓಪಿಡಿ ಸೇವೆ ಸಲ್ಲಿಸಲಾಯಿತು. ಶಾಲಾ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಗ್ರಾಮದ ಹಿರಿಯರು ಮತ್ತು ಮುಖಂಡರು. ವಿವಿಧ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು ಶಿಬಿರ ಯಶಸ್ಸಿಗೆ ಸಹರಿಸಿದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ