ಕಂದಗಲ್ಲದಲ್ಲಿ ನಡೆದ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮ.
ಕಂದಗಲ್ಲ, ಜನೇವರಿ.31:
ಕಂದಗಲ್ಲದಲ್ಲಿ ನಡೆದ ಪೋಷಕರ ನಡೆ ಅಂಗನವಾಡಿ ಕಡೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ನಾಗಭೂಷಣ ಶಿಂಪಿ ಮಹಿಳೆ ಸಂಜೀವಿನಿ ವಿಶಿಷ್ಟ ಶಕ್ತಿಗಳ ಸಂಗಮ ಮಮತೆ ಕರುಣೆ ವಾತ್ಸಲ್ಯ ಅಕ್ಕರೆ ಸ್ತ್ರೀಯ ಪ್ರಭಲ ಶಕ್ತಿಗಳು ಸ್ತ್ರೀಯರನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸಿದ ದೇಶ ನಮ್ಮದು ತಾಯಿ ಮತ್ತು ಮಗು ಪೌಷ್ಟಿಕಾoಶ ಹೊಂದಿದ ಆಹಾರವನ್ನು ಸೇವಿಸಿ ಆರೋಗ್ಯದಿಂದ ಬಾಳಬೇಕು ಎಂದರು ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯೆ ಜ್ಯೋತಿ ಹಡಪದ್ ನೆರವೇರಿಸಿದರು.ಸುಪರ ವೈಜರ್ ಆರ್ ಬಿ ಗೌಡರ ಕಾರ್ಯಕ್ರಮ ಉದ್ದೇಶಿಸಿ ” ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ ಮಹಿಳೆ ಅಬಲೆಯಲ್ಲ ಸಬಲೆ ಮಹಿಳೆಯರು ಮತ್ತು ಮಕ್ಕಳು ಜೀವನದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟರು.
![](https://i0.wp.com/sknewskannada.in/wp-content/uploads/2024/01/IMG-20240131-WA0007-955x1024.jpg?resize=708%2C759&ssl=1)
ಈ ಕಾರ್ಯಕ್ರಮದಲ್ಲಿ ಗುರುಬಸಮ್ಮಬಾದವಾಡಗಿ ಹಾಗೂ ರಿಯನ ಮುಲ್ಲಾ ಇವರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರದ ಶಂಕ್ರಮ್ಮ ಗಡಿಯಣ್ಣನವರ್ ಗೀತಾ ಹಿರೇಮಠ್ ಮಂಜುಳಾ ಡಂಬಳ ಕಾಜಮ್ಮ್ ಪರಾಸರ ದುರಗಮ್ಮ ಚಲವಾದಿ ಹಾಗೂ ಗ್ರಾಮದ ಮಹಿಳೆಯರು ಪೋಷಕರು ಮಕ್ಕಳು ಉಪಸ್ಥಿತರಿದ್ದರು.
ಯಂಕಮ್ಮ ದಾದ್ಮಿ ನಿರೂಪಿಸಿದರು. ನೀಲಮ್ಮ ಗುರುವಿನ ಸ್ವಾಗತಿಸಿ ವಂದಿಸಿದರು.ನಂತರ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವುದರ ಮೂಲಕ ಗಮನ ಸೆಳೆದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ
ಇಳಕಲ್