ಬೆಂಗಳೂರು ಸ್ಲೀಪರ್ ಕೋಚ್ ಬಸ್ ಓಡಿಸುವಂತೆ ಆಗ್ರಹಿಸಿ – ಕರವೇ ಮುಖಂಡರಿಂದ ಮನವಿ.

ಇಂಡಿ. ಜನೇವರಿ. 31:

ಜಿಲ್ಲಾ ಕೇಂದ್ರ ರಚನೆಯ ಮುಂಚೂಣಿಯಲ್ಲಿರುವ ಇಂಡಿ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ಬೆಂಗಳೂರಿಗೆ ಸ್ಲೀಪರ್ ಕೋಚ್ ಬಸ್ ಓಡಿಸಬೇಕು.ಶಾಲಾ ಕಾಲೇಜಿಗೆ ಹೋಗುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಿರಗಿ ಗ್ರಾಮಕ್ಕೆ ಪ್ರತಿ ನಿತ್ಯ ಬೆಳಗ್ಗೆ 9ಗಂಟೆಗೆ ಹಾಗೂ ಸಾಯಂಕಾಲ 4ಗಂಟೆಗೆ ಬಸ್ ಓಡಿಸಬೇಕು.ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಹಾಗೂ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಧಮ೯ರಾಯ ಸಾಲೋಟಗಿ ನೇತೃತ್ವದಲ್ಲಿ ಕೆಕೆಆರ್ಟಿಸಿ ವಿಜಯಪುರ ಡಿಟಿಒ ಡಿ.ಎ.ಬಿರಾದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಅವರು ಇಂಡಿ ಪಟ್ಟಣದಿಂದ ಪ್ರತಿ ನಿತ್ಯ ಸುಮಾರು 5ರಿಂದ 6ಖಾಸಗಿ ಬಸ್ ಗಳು ಬೆಂಗಳೂರಿಗೆ ಓಡಾಡುತ್ತವೆ.ಇವುಗಳಿಗೆ ಯಾವುದೇ ಆಥಿ೯ಕ ಹಾನಿ ಆಗಿರುವುದಿಲ್ಲ ಎಂದು ಹೇಳಿದ ಅವರು ಮಿರಗಿ ಗ್ರಾಮ ತಾಲೂಕಿನ ಕೊನೆಯ ಗ್ರಾಮವಾಗಿದ್ದು,ಮಿರಗಿ ಗ್ರಾಮದಲ್ಲಿ ಪ್ರೌಢಶಾಲೆ,ಸರಕಾರಿ ಪ್ರಾಥಮಿಕ ಶಾಲೆಗಳು ಇವೆ ಈ ಶಾಲೆಗಳಿಗೆ ಪ್ರತಿನಿತ್ಯ ಸುಮಾರು 20 ರಿಂದ 25ಜನ ಶಿಕ್ಷಕರು ‌ಹಾಗೂ ಹಲವು ಜನ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗುತ್ತಾರೆ.ಬೆಳಗ್ಗೆ ಶಾಲಾ ಅವಧಿಯಲ್ಲಿ ಬಸ್ಸಿನ ಅನುಕೂಲ ಇಲ್ಲದಂತಾಗಿ ಟಂಟಂ ಬಾಡಿಗೆ ಮಾಡಿಕೊಂಡು ನಿತ್ಯ ಹೋಗುತ್ತಿದ್ದಾರೆ.

ಹೀಗಾಗಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತಿ ನಿತ್ಯ ಬೆಳಗ್ಗೆ 9ಗಂಟೆಯಿಂದ ಸಾಯಂಕಾಲ 4ಗಂಟೆಗೆ ಇಂಡಿಯಿಂದ ಮಿರಗಿಗೆ ಬಸ್ ಓಡಿಸಬೇಕೆಂದು ಅವರು ಮನವಿ ಮಾಡಿಕೊಂಡರು.ಮನವಿಗೆ ಸ್ಪಂದಿಸಿದ ಡಿಟಿಒ ಡಿ.ಎ.ಬಿರಾದಾರ ಹಾಗೂ ಘಟಕ ವ್ಯವಸ್ಥಾಪಕರಾದ ಬಿರಾದಾರ ಅವರು ಎರಡ್ಮೂರು ದಿನಗಳಲ್ಲಿ ಮಿರಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ.ಬೆಂಗಳೂರಿಗೆ ಸ್ಲೀಪರ್ ಕೋಚ್ ಬಸ್ ಬಿಡಲು ಈಗಾಗಲೆ ತಯಾರಿ ನಡೆಸಿದ್ದೇವೆ.ಒಂದು ವಾರದೊಳಗಾಗಿ ಬೆಂಗಳೂರಿಗೆ ಇಂಡಿಯಿಂದ ಸ್ಲೀಪರ್ ಕೋಚ್ ಬಸ್ ಜೋಡಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಬಾಳು ಮುಳಜಿ.ಧಮ೯ರಾಯ ಸಾಲೋಟಗಿ.ಹಿರಿಯ ನುರಿತ ಪತ್ರಕತ೯ರಾದ ಖಾಜು ಸಿಂಗೆಗೋಳ.ಮಹೇಶ ಹೂಗಾರ.ಶಿವಪ್ಪ ಐರೋಡಗಿ.ಚನಬಸಪ್ಪ ಏವೂರ.ಸಿದ್ದು ಖೇಡ.ಇತರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button