ಯುವ ಪ್ರತಿಭೆ ಎಂಬ ಗಿಡಕ್ಕೆ ನೀರು ಹಾಕಿ ಹೆಮ್ಮರವಾಗಿ ಬೆಳೆಯಲು ಅವಕಾಶಗಳು ಸಿಗಲಿ – ಶಾಸಕ ಡಾ. ಎನ್.ಟಿ.ಶ್ರೀನಿವಾಸ್.
ಕೂಡ್ಲಿಗಿ ಫೆಬ್ರುವರಿ.3

ವಿಜಯನಗರ ಸಾಮ್ರಾಜ್ಯದ ಹಂಪಿ ಉತ್ಸವದ ಕಾರ್ಯಕ್ರಮಕ್ಕೆ ಆಯ್ಕೆಯಾದ ತಾಲೂಕಿನ ಕಲಾವಿದರನ್ನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ಕೂಡ್ಲಿಗಿ ಪ್ರವಾಸ ಮಂದಿರದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ ಕೆಲವರದ್ದು ಸುಪ್ತವಾಗಿರುತ್ತದೆ ಇನ್ನು ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನೂ ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಿಸುವವಾರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂಥಗುತ್ತದೆ. ಕಲೆ ಉಸಿರು ಜೀವ ಬಾಳ ಎಂದು ಬದುಕಿನ ಉದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿ ಕೊಳ್ಳಲು ಪ್ರಯತ್ನಿಸುತ್ತಿರುವ ಕ್ಷೇತ್ರದ ಯುವ ಪ್ರತಿಭೆಗಳಿಗೆ ಕಲಾವಿದರೆಂಬ ಗಿಡಕ್ಕೆ ನೀರು ಹಾಕಿ ಹೆಮ್ಮರವಾಗಿ ಬೆಳೆಯಲಿಗ್ರಾಮೀಣ ಭಾಗದಲ್ಲಿ ಸಾಕಷ್ಟು ಕಲಾವಿದರಿದ್ದಾರೆ, ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗಬೇಕು, ಸಾಹಿತ್ಯ , ಮತ್ತು ಸಾಕಷ್ಟು ಕಲೆಗಳು ಉಳಿಯುತ್ತಿರುವುದು ಗ್ರಾಮೀಣ ಭಾಗದ ಕಲಾವಿದರಿಂದ ಹೀಗಾಗಿ ನಮ್ಮ ಸರ್ಕಾರ ಸಾಕಷ್ಟು ಕಲಾವಿದರಿಗೆ ಅವಕಾಶ ಮಾಡಿಕೊಟ್ಟಿದೆ. ನಿರಂತರವಾಗಿ ಶ್ರಮವಹಿಸಿದ ಕಾರ್ಯಕ್ಕೆ ಸಮಾಜದ ಸಹಕಾರ, ಪ್ರೋತ್ಸಾಹ ಸಿಕ್ಕಾಗ ಸಿಗುವ ಆನಂದ ಮತ್ತೆಲ್ಲಿ ಸಿಗುವುದಿಲ್ಲ, ಐತಿಹಾಸಿಕ ಹಂಪಿ ಉತ್ಸವದಲ್ಲಿ ಆಯ್ಕೆಯಾದ ಕಲಾವಿದರಿಗೆ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟ ಅವಕಾಶ ಸಿಗಲಿಲ್ಲ ಎಂದು ಶಾಸಕರು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸನ್ಮಾನಿಸಿದ ಕಲಾವಿದರಾದ ಬಣಕಾರ್ ಮೂಗಪ್ಪ ಹಾಗೂ ಮಂಗನಹಳ್ಳಿ ಶೇಖರಪ್ಪ.ಸೊಲದಹಳ್ಳಿ ತಿಪ್ಪೆಸ್ವಾಮಿ ಸಂಗೀತ ನಿರ್ದೇಶಕರು ಓಬಳಶೆಟ್ಟಿಹಳ್ಳಿ ನುಂಕೆಶ ಶಾಸಕರ ಆಪ್ತರಾದ ಎಂ ಮರುಳುಸಿದ್ದಪ್ಪ ವೈ.ರವಿಕುಮಾರ್ ಇ.ಓ ಬಿ ರಾಘವೇಂದ್ರ ಗೌಡ್ರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ