ಕರ್ನಾಟಕ ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಉಮೇಶ್ ಕಾರಜೋಳ ರವರಿಗೆ ಜಾಂಭವ ಯುವ ಸೇನಾ ಸಂಘಟನೆಯಿಂದ ಸನ್ಮಾನ!
ವಿಜಯಪುರ ಫೆಬ್ರುವರಿ.6
![](https://i0.wp.com/sknewskannada.in/wp-content/uploads/2024/02/IMG-20240205-WA0057-1024x478.jpg?resize=708%2C330&ssl=1)
ಉಮೇಶ್ ಅಣ್ಣ ಕಾರಜೋಳ ಇವರು ಸದಾ ಕಾಯಕದಲ್ಲಿ ತೊಡಗಿಸಿ ಕೊಂಡಿರುವ ಅತಿ ಉತ್ಸಾಹಿ ಯುವನಾಯಕ ಬಡವರ ಬಗ್ಗೆ ಅಪಾರ ಕಾಳಜಿ ವಹಿಸಿರುವ ಸರದಾರನೇರ ನಡೆಯದಿಟ್ಟ ನಾಯಕ ಇವರು ಶ್ರೀಮಂತಿಕೆಯಲ್ಲಿ ಬೆಳೆದರು ಇವರಲ್ಲಿ ಬಡವ ಬಲ್ಲಿದ ಎಂಬ ಭೇದ ಭಾವವಿಲ್ಲ ಇವರ ಈ ಗುಣವೇ ಈ ಯುವ ಜನತೆ ರಾಜಕೀಯದಲ್ಲಿ ಧುರಿಣರಾಗಲು ಇವರನ್ನು ಕೈಬೀಸಿ ಕರೆಯುತ್ತಿದೆ.ಯಶಸ್ವಿ ನಾಯಕ ಜನನಾಯಕ ನೇರ ನುಡಿಯ ಮತ್ತು ನುಡಿದಂತೆ ನಡೆಯುವ ದೀನ ದಲಿತರ ಆಶಾಕಿರಣ ಇವರು ಪ್ರತಿಷ್ಠತ ರಾಜಕೀಯ ಹಿನ್ನಲೆ ಇರುವ ಕುಟುಂಬದ ಕುಡಿಯಾಗಿರುವ ಎಲ್ಲರ ಅಭಿಮಾನ ಮೆಚ್ಚುಗೆಗೆ ಪಾತ್ರರಾಗಿರುವ ಇವರಿಗೆಕರ್ನಾಟಕ ರಾಜ್ಯ ಬಿಜೆಪಿ ಎಸ್ ಸಿ ಮೂರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಶ್ರೀ,ಉಮೇಶ್ ಅಣ್ಣ ಕಾರಜೋಳ ಅವರಿಗೆ ವಿಜಯಪುರ ಅವರ ನಿವಾಸದಲ್ಲಿ ಜಾಂಭವ ಯುವ ಸೇನಾ ರಾಜ್ಯ ಉಪಾಧ್ಯಕ್ಷರಾದ ಡಾ.ಮಲಕು ಬಾಗೇವಾಡಿ ಹಾಗೂ ಮಹಾಂತೇಶ ಹಾದಿಮನಿ, ರಮೇಶ್ ಹಳ್ಳಿ, ಈಠಲ ಮುತ್ತ್ಯಾ ಹೊಸಮನಿ ಅರುಣ ಹೊಸಮನಿ ಹಾಗೂ ಜಾಂಭವ ಯುವ ಸೇನಾ ಸಂಘಟನಾ ಪದಾಧಿಕಾರಿಗಳು ಶಾಲು ಹೊದಿಸಿ ಹಾರ ಹಾಕಿ ಹೂ ಗುಚ್ಚು ನೀಡಿ ಸನ್ಮಾನಿಸಲಾಯಿತು.ನೀವು ಈ ಪಕ್ಷದಲ್ಲಿ ದುಡಿದು ಇನ್ನೂ ಹೆಚ್ಚಿನ ಹೆಸರು ಮಾಡಿ ರಾಜಕೀಯದಲ್ಲಿ ಬೆಳೆಯಲೆಂದು ಶುಭ ಹಾರೈಸಿದರು.
ವರದಿ:ಮಹಾಂತೇಶ ಹಾದಿಮನಿ.