ಯೋಗಾಸನ ಮತ್ತು ವನ ಮಹೋತ್ಸವ ಕಾರ್ಯಕ್ರಮ.

ಕೊಟ್ಟೂರು ಫೆಬ್ರುವರಿ.6

ಪಟ್ಟಣದ ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಕೊಟ್ಟೂರು ಇವರ ಸಹ ಯೋಗದೊಂದಿಗೆ ಯೋಗಾಸನ ಮತ್ತು ವನ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂರನೇ ದಿನವಾದ ಭಾನುವಾರ ಬೆಳಿಗ್ಗೆ 6.ಗಂಟೆಗೆ ಶಿಬಿರಾರ್ಥಿಗಳಿಗೆ ಶ್ರೀ ಯುತ ಬಂಜಾರ ನಾಗರಾಜ್ ದೈಹಿಕ ಶಿಕ್ಷಕರು ಇವರಿಂದ ಯೋಗಾಸನದ ಮಹತ್ವ ತಿಳಿಸಿ ತರಬೇತಿಯನ್ನು ನೀಡಿದರು ತದ ನಂತರದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರಜತ್ ಹಾಗೂ ಬಂಜಾರ ನಾಗರಾಜ್ ಇವರಿಂದ ರಾಷ್ಟ್ರೀಯ ಸೇವಾ ಯೋಜನೆ ಧ್ವಜಾರೋಹಣ ನೆರವೇರಿಸಿದರು. ನಂತರದಲ್ಲಿ ಕೊಟ್ಟೂರಿನ ಹಸಿರು ಹೊನಲು ತಂಡದಿಂದ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ರಚನಾ ರಜತ್,ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಂಯೋಜಕರಾದ ಕೆ ಶಶಿ ಕಿರಣ್, ಕೊಟ್ರೇಶ್ ಪಿ.ಕೆ .ಎಂ ಮತ್ತು ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣ ಹೆಚ್. ಉಪಸ್ಥಿತಿ ಇದ್ದರು ಹಾಗೂ ಸಂಗಮೇಶ್ವರದ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button