ಡಾ. ಬಾಬು ರಾಜೇಂದ್ರ ನಾಯಕ ಅವರಿಗೆ ಬಿಜೆಪಿಯಿಂದ ವಿಜಯಪುರ ಎಂ.ಪಿ ಟಿಕೆಟ್ ಗೆ ಸುನೀಲ ನಾಯಕರಿಂದ ಆಗ್ರಹ.

ದೇವರ ಹಿಪ್ಪರಗಿ ಫೆಬ್ರುವರಿ.6

ದೇವರ ಹಿಪ್ಪರಗಿಯ ವೃತ್ತಿಯಲ್ಲಿ ವೈದ್ಯರು ಪ್ರವೃತ್ತಿಯಲ್ಲಿ ಅಪ್ಪಟ ಸಮಾಜ ಸೇವಕರಾಗಿರುವ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ಭಾರತೀಯ ಜನತಾ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟನ್ನು ನೀಡಬೇಕೆಂದು ದೇವರ ಹಿಪ್ಪರಗಿ ಹೆಸ್ಕಾಂನ ಕ್ಲಾಸವನ್ ಕಾಂಟ್ರಾಕ್ಟರ್ ಆಗಿರುವ ಸುನೀಲ ನಾಯಕ ಇವರು ಆಗ್ರಹಿಸಿದ್ದಾರೆ.ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬರುವ ಜನ ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿದ್ದಾರೆ.ಆದರೆ ದಿನ ಬೆಳಗಾದರೆ ಜನ ಸೇವೆಯೇ ಸಮಾಜ ಸೇವೆ ತುಡಿತ ಹೊಂದಿರುವ ವ್ಯಕ್ತಿ ಡಾ.ಬಾಬುರಾಜೇಂದ್ರ ನಾಯಕ ಅವರಾಗಿದ್ದಾರೆ.ಬಿಜ್ಜರಗಿಯ ಭಾಗ್ಯವಿಧಾತ ಹಾಗೂ ಶತಮಾನದ ಸಂತ ಶ್ರೀ ಸಿದ್ದೇಶ್ವರ ಶ್ರೀಗಳ ಅಪ್ಪಟ ಭಕ್ತರಾಗಿರುವ ಇವರು ಸರಳತೆಯನ್ನು ಮೈಗೂಡಿಸಿ ಕೊಂಡು ಯಾವುದೇ ರೀತಿಯ ಅಹಂ ಇಲ್ಲದ ಸಮಾಜ ಮುಖಿ ಹಾಗೂ ಜನಸ್ನೇಹಿ ನಾಯಕರಾಗಿದ್ದಾರೆ.ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹಗಲಿರುಳು ಇವರು ಜನ ಸೇವೆ ಮಾಡಿರುತ್ತಾರೆ.ಪರಿಸರ ಪ್ರೇಮಿಯಾಗಿ ಜಿಲ್ಲೆಯಾದ್ಯಂತ ಲಕ್ಷಾಂತರ ಗಿಡ ಮರಗಳನ್ನು ನೆಡುವಲ್ಲಿ ನಿರತರಾಗಿದ್ದಾರೆ.ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಇವರು ಸೇವೆ ಮಾಡದ ಕ್ಷೇತ್ರವಿಲ್ಲ.ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆಯನ್ನು ಪ್ರತಿ ನಿತ್ಯವೂ ಮಾಡುತ್ತಲೇ ಬಂದಿದ್ದಾರೆ.ವಿಜಯಪುರ ಜಿಲ್ಲೆಯಾದ್ಯಂತ ತಮ್ಮದೇಯಾದ ಕಾರ್ಯವೈಖರಿಯ ಮೂಲಕ ಜನಮನ ಗೆದ್ದಿರುವ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟನ್ನು ನೀಡುವ ಮೂಲಕ ಮತ್ತಷ್ಟು ಜನಸ್ನೇಹಿ ,ಜನಾನುರಾಗಿ ವ್ಯಕ್ತಿತ್ವದ ವ್ಯಕ್ತಿಯನ್ನು ಮುಂದೆ ತರಬೇಕೆಂದು ಸುನೀಲ ನಾಯಕ ಅವರು ಒತ್ತಾಯಿಸಿರುತ್ತಾರೆ‌.

ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button