ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ರೈತರಿಂದ ಆಗ್ರಹ.
ಇಂಡಿ ಫೆಬ್ರುವರಿ.6

ತಾಲೂಕಿನ ಎಲ್ಲಾ ಕರೆಗಳಿಗೆ ನೀರು ತುಂಬಿಸುವಂತೆ ಇಂದು ನೂರಾರು ರೈತರು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ನೇತೃತ್ವದಲ್ಲಿ ಇಂಡಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಕೃಷ್ಣ ಕಾಲುವೆ, ಹಾಗೂ ತಿಡಗುಂದಿ ಬ್ರ್ಯಾಂಚ್ ಕಾಲುವೆ ಮುಖಾಂತರ ತಾಲೂಕಿನ ಎಲ್ಲಾ ಕರೆಗಳಿಗೆ ನೀರು ತುಂಬಿಸುವಂತೆ, ಗುತ್ತಿ ಬಸವಣ್ಣ ಮುಖ್ಯ ಕಾಲುವೆಗೆ ನೀರು ಹರಿಸಬೇಕು.ಈ ವರ್ಷ ಭೀಕರ ಬರದಿಂದ ಇದ್ದಬಿದ್ದ ಬೆಳೆಗಳು, ವಿಶೇಷವಾಗಿ ಲಿಂಬೆ, ದಾಳಿಂಬೆ, ದ್ರಾಕ್ಷಿ ನೀರಿಲ್ಲದೆ ಕಮರಿದ್ದು. ಸರ್ಕಾರ ಕೂಡಾ ಬರ ಪರಿಹಾರ ಕಾಮಗಾರಿ ಪ್ರಾರಂಭಿಸಿ ಜನ ಜಾನುವಾರುಗಳು ಹಿತ ದೃಷ್ಟಿಯಿಂದ ನೀರು ಹರಿಸಿ ಎಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಉಪ ವಿಭಾಗಾಧಿಕಾಗಾಳಾದ ಹಮೀದ್ ಗದ್ಯಾಳ ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶ್ರೀಶೈಲಗೌಡ ಪಾಟೀಲ,ಆರ್ ಪಿ,ಐ ಅಧ್ಯಕ್ಷ ನಾಗೇಶ್ ತರಕೇರಿ, ಮಹಿಬೂಬ ಬೇವನೂರ ಮಾತನಾಡಿದರು.ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ,ರೈತ ಮುಖಂಡರಾದ ಬಸವರಾಜ ಹಂಜಗಿ,ಜಟ್ಟೇಪ್ಪ ಸಾಲೋಟಗಿ,ಗುರಪ್ಪ ಅಗಸರ,ಬಾಳು ಕೋಟಗೊಂಡ, ದುಂಡು ಬಿರಾದಾರ, ರಾಯಪ್ಪ ಉಪ್ಪಾರ, ಕೆಂಚಪ್ಪ ಉಪ್ಪಾರ,ರಾಜು ಮುಲ್ಲಾ, ಬಾಬು ಕಾರಬಾರಿ, ವಿಠ್ಠಲ ಲಚ್ಯಾಣ,ದರೇಪ್ಪ ಸುದಾಮ, ಸುಭಾಸ ಕಟ್ಟೀಮನಿ, ಬಸಲಿಂಗಪ್ಪ ಉಪ್ಪಾರ, ಗಣಪತಿ ಉಪ್ಪಾರ,ಫಜಲು ಮುಲ್ಲಾ,ಬಾಬು ಕಾಂಬಳೆ,ಲಕ್ಕಿ ಲಚ್ಯಾಣ,ನಿಯಾಜ ಅಗರಖೇಡ, ಮೋತಿಲಾಲ್ ಕಾರಬಾರಿ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ