ಮಕ್ಕಳಿಗೆ ಪಠ್ಯದಾಚೆ ಹೊಸದಾಗಿ ಕಲಿಸಲು ಶಿಕ್ಷಕರು ಉತ್ಸುಕರಾಗ ಬೇಕು ಆಗ ಮಾತ್ರ ಗುಣಮಟ್ಟದ ಶಿಕ್ಷಣ ಕಲಿಯಲು ಸಾಧ್ಯ – ಭೀಮಣ್ಣ ಗಜಾಪುರ.
ನಿಂಬಳಗೆರೆ ಫೆಬ್ರುವರಿ.8

ಇಂದು ಮಕ್ಕಳು ಬರೀ ಓದುವ ಮೂಲಕ ಅಂಕಗಳನ್ನು ತೆಗೆಯುವ ಯಂತ್ರಗಳಾಗುತ್ತಿರುವುದು ನಮ್ಮ ಸಮಾಜದ ದುರಂತವಾಗಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ಭೀಮಣ್ಣ ಗಜಾಪುರ ಬೇಸರ ವ್ಯಕ್ತಪಡಿಸಿದರು.ಅವರು ತಾಲೂಕಿನ ಹಾರಕಬಾವಿ ಸಮೀಪದ ನಿಂಬಳಗೆರೆ ಗ್ರಾಮದ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 25.ನೇ ವರ್ಷದ ಬೆಳ್ಳಿಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ,ಮಕ್ಕಳಿಗೆ ಜೀವನ ಪಾಠ, ಹೊಂದಾಣಿಕೆ ಜೀವನ ಕಲಿಸಿ ಕೊಡಬೇಕಾದ ಅಗತ್ಯತೆ ಇದ್ದು ಇದಕ್ಕಾಗಿ ಶಿಕ್ಷಕರು ಶಾಲೆಗಳಲ್ಲಿ ಸೖಜನಶೀಲ ಶಿಕ್ಷಣ ನೀಡಲು ಮುಂದಾಗ ಬೇಕು ಇದಕ್ಕೆ ಪೋಷಕರು ಸಹಕಾರ ನೀಡಿದಾಗ ಮಾತ್ರ ನಮ್ಮ ಮಕ್ಕಳು ಭವಿಷ್ಯತ್ತಿನಲ್ಲಿ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ.ಮಕ್ಕಳು ಸ್ಥಳೀಯ ಇತಿಹಾಸ, ಪರಂಪರೆ, ಆಚರಣೆಗಳನ್ನು ತಿಳಿದು ಕೊಳ್ಳಬೇಕಾದ ವಾತಾವರಣವನ್ನು ಶಾಲೆಗಳು ನಿರ್ಮಾಣವಾಗ ಬೇಕು ಈ ಮೂಲಕ ಶಿಕ್ಷಣದ ಪ್ರಮುಖ ಧ್ಯೇಯವನ್ನು ಸಾಧಿಸಬೇಕು ಎಂದರು.

ಶಿಕ್ಷಕರು ಸಹ ನಿರಂತರ ಕಲಿಕೆಯಲ್ಲಿ ತೊಡಗುವ ಮೂಲಕ ಮಕ್ಕಳಿಗೆ ಪಠ್ಯದಾಚೆ ಹೊಸದನ್ನು ಕಲಿಸಲು ಉತ್ಸುಕರಾಗಬೇಕು ಆಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಸಾಹಿತಿ ಭೀಮಣ್ಣ ಗಜಾಪುರ ಅವರು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕರೆ ನೀಡದರು. ಶ್ರೀ ಕಲ್ಲೇಶ್ವರ ಸ್ವಾಮಿ ವಿಧ್ಯಾಸಂಸ್ಥೆಯ ಕಾರ್ಯದರ್ಶಿ ಎಸ್. ವೀರಣ್ಣ ಪ್ರಾಸ್ತವಿಕವಾಗಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಶಾಲೆಗಳು ಪಟ್ಟಣದ ಶಾಲೆಗಳಂತೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ.
ಹಳ್ಳಿಗಳಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆತರೆ ಮಕ್ಕಳು ಪಟ್ಟಣಕ್ಕೆ ಶಿಕ್ಷಣ ಕಲಿಯಲು ವಲಸೆ ಹೋಗುವುದನ್ನು ತಪ್ಪಿಸಿ ದಂತಾಗುತ್ತದೆ ಈಗಾಗಿ ನಿಂಬಳಗೆರೆಯಂತಹ ಮೂಲೆ ಕಟ್ಟಿನ ಹಳ್ಳಿಯಲ್ಲಿ ಹತ್ತಾರು ಹಳ್ಳಿಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದು ಪೋಷಕರ ಸಹಕಾರದಿಂದ 25 ವರ್ಷಗಳನ್ನು ಸವೆಸಿ ಈಗ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿರುವುದೇ ಸಾಕ್ಷಿಯಾಗಿದೆ.

ಅಲ್ಲದೆ ಈ ಶಿಕ್ಷಣ ಸಂಸ್ಥೆಯ ಏಳ್ಗೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ನಾವು ಚಿರಋಣಿ ಎಂದು ತಿಳಿಸಿದರು. ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಂಗಳಮ್ಮ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಟಿ. ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಎನ್.ಜಿ.ಚನ್ನಬಸವನಗೌಡ, ಗ್ರಾಮದ ಯುವ ಮುಖಂಡರಾದ ಎಂ.ಜಿ.ರಾಜೇಂದ್ರಗೌಡ, ಎ.ಅನ್ವರ್ ಸಾಬ್, ಮಲ್ಲಪ್ಪ ಕ್ಯಾಸನಹಳ್ಳಿ, ಶಾಲೆಯ ಮುಖ್ಯಶಿಕ್ಷಕಿ ಕೆ.ಶಿವಲೀಲಾ, ಸಹಶಿಕ್ಷಕರಾದ ಕೆ.ಮಂಜುನಾಥ, ಎಂ.ಪರುಶುರಾಮ್, ಜೆ. ಪರಿಮಳಾ, ಜೆ. ವೀಣಾ, ಮಂಜುಶ್ರೀ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು, ಹಾಲು ಉತ್ಪಾದಕ ಸಂಘದ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಕುಮಾರಿ ಕೆ.ಸುಪ್ರಿತಾ, ಪಲ್ಲವಿ ಪ್ರಾರ್ಥಿಸಿದರು. ಶಿಕ್ಷಕರಾದ ಕೆ.ನಾಗರಾಜ, ಎಸ್. ದೊಡ್ಡಬಸಪ್ಪ ನಿರೂಪಿಸಿದರು. ಎಸ್. ರೇಖಾ ವಂದಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ