ಆಗಷ್ಟ 6ರಂದು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ..
ಹುನಗುಂದ ಆಗಷ್ಟ. 3

ಆಗಷ್ಟ 6ರಂದು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹುನಗುಂದ:ಪಟ್ಟಣದ ಸನ್ 199೦-91 ನೆಯ ಸಾಲಿನ ವಿಜಯ ಮಹಾಂತೇಶ ಪ್ರೌಢ ಶಾಲೆ ಹಾಗೂ ವಿ.ಮ.(ಗು.ಮ.ಗು ಸ್ಮಾರಕ)ಬಾಲಿಕೆಯರ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಆ.6 ರಂದು ರವಿವಾರ ಬೆಳಗ್ಗೆ 10.15 ಗಂಟೆಗೆ ಎಪಿಎಂಸಿ ಹತ್ತಿರ ರಾಷ್ಟ್ರೀಯ ಯ ಹೆದ್ದಾರಿ 5೦ರಲ್ಲಿ ಇರುವ ಎಂ.ಆರ್.ಗಾರ್ಡನ್ನಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ.ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದು.
ವಿಶ್ರಾಂತ ಮುಖ್ಯೋಪಾಧ್ಯಯರಗಳಾದ ಎಂ.ಎಸ್.ತೆನಹಳ್ಳಿ ಮತ್ತು ವ್ಹಿ.ವ್ಹಿ.ಪತ್ತಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು.ವಿಶ್ರಾಂತ ಮುಖ್ಯೋಪಾಧ್ಯಯ ಎ.ಓ.ಬಿರಾದಾರ,ವಿ.ಮವಿ.ವ ಸಂಘದ ಆಡಳಿತಾಧಿಕಾರಿ ಶಶಿಕಲಾ ಎನ್ ಅತಿಥಿಗಳಾಗಿ ಆಗಮಿಸಲಿದ್ದಾರೆ.ವಿ.ಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಬಿ.ಎಸ್.ಬನ್ನಟ್ಟಿ ಉಪಸ್ಥಿತಿಯನ್ನು ವಹಿಸಲಿದ್ದಾರೆ.ಈ ವೇಳೆ ಗುರುಗಳಿಗೆ ಗೌರವ ವಂದನೆ ಮತ್ತು ಸಿಬ್ಬಂದಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ