“ಮರೆಯದ ಮಮತೆಯ ಮಾತೆ”…..

ಮೊದಲ ಅಕ್ಷರ ಮಾತೆ
ಹೊತ್ತಿಗೆ ಮಮತೆಯ ತುತ್ತನಿಟ್ಟು
ಸಲುಹಿದವಳು ಪುಣ್ಯದ ಫಲ
ಅನ್ನಪೂರ್ಣೆಯ ಪ್ರಸಾದದಅ
ಮೃತ ಸವಿದ ಧನ್ಯತೆಯು
ಚಿಕ್ಕತನದಲಿ ಚೊಕ್ಕತನ ಕಲಿಸಿದ
ಅರಿವಿಗೆ ಗುರುಮಾತೆ
ಮಕ್ಕಳ ಬೇದ ಅರಿಯದ ಸಮಾನ
ಗುಣ ಕರುಳ ಕರುಣೆ ತೋರಿದ
ಮಹಾನ್ ಭೂಮಿತೂಕದವಳು
ಜೀವನದಲಿ ನೋವು ಉಂಡರು
ನಲಿಯುವ ಸುಮನ
ಭಾವ ಬೆಳಸಿ ಬದುಕುವ
ದಾರಿ ತೋರಿದ ಮಹಾ ಮಹಿಮಳು
ಜೀವನ ಸಾಕ್ಷಾತ್ಕಾರ ಸಾಕ್ಷಿಕರಿಸಿ
ದಜಗದಲಿ ಮಾತೆಯು ನಡೆ ನುಡಿ
ಗೆಸರ್ವಶ್ರೇಷ್ಠ ಮಮಕಾರದ ಮಾತೆ
ಮಮತೆಯ ಮೂರ್ತಿ ಬದುಕಿನ ಶಕ್ತಿ
ಜೀವನದ ಸ್ಪೂರ್ತಿ
ವಿಶಾಲ ಮನಸ್ಸಿನ ಅಮ್ಮ
ವರ್ಣಿಸಲಾಗದ ಪದ ಅಮ್ಮ
ಯಾರ ಪ್ರೀತಿಗೂ ಸರಿಸಾಟಿಯಿಲ್ಲ
ಮಮತೆ ತೀರಿಸಲಾಗದ ತಾಯಿಯ
ಋಣ ಏಳೇಳು ಜನ್ಮಕ್ಕೂ ಮಾತೆಯ
ಮಡಿಲಲಿರುವ ಭಾಗ್ಯವಿರಲಿ
ಅಗಣಿತ ವಾಸ್ತಲ್ಯ ಅಮ್ಮಕೊಟ್ಟ ಜೀವ
ಹಾರೈಕೆಯ ಸುಭಾವವೇ ಮಹಾರಾಜ
ಮಹಾರಾಣಿ ತರಹ ನಲಿಯುವರು
ಮಾತೃತ್ವದ ಮಹಿಮೆ ಜಗದಲಿ ಅಮರ
ಮಾತೆಯ ಪಾದದಡಿ ಶಿರ ಭಾಗಿ ನಮಸಿ
“ಮರೆಯದ ಮಾತೆಯ ಮಮತೆ”
ಮರೆಯದೇ ನಿತ್ಯ ನಿರಂತರ
ತಾಯಿಯ ನೆನೆ ಮನವೇ ಜನ್ಮ ಪಾವನ.
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಮಾನವ ಜೀವ ರಕ್ಷಕ”
ರಾಷ್ಟ್ರೀಯ ಐಕಾನ್ ಪ್ರಶಸ್ತಿಪುರಸ್ಕೃತರು
ಬಾಗಲಕೋಟ.