ವಿಕಲ ಚೇತನರಿಗೆ ದ್ವಿಚಕ್ರ ವಾಹನ ಮತ್ತು ಕೈ ಚಾಲಿತ ಯಂತ್ರಗಳ ವಿತರಣೆಗೆ ಚಾಲನೆ ನೀಡಿದ ಶಾಸಕರು.
ಮೊಳಕಾಲ್ಮುರು ಅಕ್ಟೋಬರ್.20

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಆಡಳಿತ ಸೌಧದ ಮುಂದೆ ವಿಕಲ ಚೇತನರ ದ್ವಿಚಕ್ರ ವಾಹನಗಳನ್ನು ಮತ್ತು ಕೈ ಚಾಲಿತ ಯಂತ್ರಗಳನ್ನು ವಿಕಲ ಚೇತನರಿಗೆ ಇಂದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಚೀಫ್ ಆಫೀಸರ್ ಮಂಜುನಾಥ ತಾಲೂಕು ಡೆಪ್ಯುಟಿ ತಶೀಲ್ದಾರಾದ ಗೋಪಾಲ್ ಜಿಲ್ಲಾ ಪಂಚಾಯತಿ ಇಲಾಖೆಯಾದ ಕೆ ನಾಗನಗೌಡ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಾದ ಹರೀಶ್ ಇವರು ಭಾಗವಹಿಸಿ ಮತ್ತು ಮೊಳಕಾಲ್ಮೂರು ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಿ ಪ್ರಕಾಶ್ ಮೊಳಕಾಲ್ಮೂರು ಪಟ್ಟಣದ ಗುತ್ತಿಗೆದಾರ ಅಧ್ಯಕ್ಷ ಖಾದರ್ ಮತ್ತು ಅಬ್ದುಲ್ಲ ಮತ್ತು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮೊಳಕಾಲ್ಮೂರು ಪಟ್ಟಣಕ್ಕೆ ನೀರಿನ ವ್ಯವಸ್ಥೆ ಸರಿಯಾದ ರೀತಿಯಿಂದ ವ್ಯವಸ್ಥಿತವಾಗಿ ನೀರನ್ನು ವೇಸ್ಟ್ ಮಾಡದೆ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕರು ತಿಳಿಸಿದರು ಮೊಳಕಾಲ್ಮೂರು ಪಟ್ಟಣದ ಪ್ರಮುಖರು ವಾಟರ್ ಫಿಲ್ಟರ್ ನೀರು ವೇಸ್ಟ್ ಆಗುವಾಗ ಆ ನೀರನ್ನು ಮನೆ ಬಳಕೆಗೆ ಮತ್ತು ಬಟ್ಟೆ ಒಗೆಯಲು ದನ ಕರು ಕುರಿ ಮೇಕೆ ಹಸು ವೇಸ್ಟ್ ಆಗದಂತೆ ಬಳಸಿರಿ ಎಂದು ಮೊಳಕಾಲ್ಮೂರು ಪಟ್ಟಣದ ಸಾರ್ವಜನಿಕರಿಗೆ ಶಾಸಕರು ತಿಳಿಸಿದರು ಹಿಂದೆ ಆಗಿರೋದೇಲ್ಲ ಮರೆತು ಈಗ ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಮಾನ್ಯ ಶಾಸಕರು ಸಭೆಯಲ್ಲಿ ತಿಳಿಸಿದರು ಮತ್ತು ಲೇಔಟ್ಗಳಲ್ಲಿ ಸರಿಯಾದ ರೀತಿಯಿಂದ ರೋಡ್ ವ್ಯವಸ್ಥೆ ಚರಂಡಿ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ ಇವೆಲ್ಲವನ್ನು ಮೂಲಭೂತ ಸೌಕರ್ಯಗಳು ಲೇಔಟ್ಗಳಿಗೆ ಸರಿಯಾದ ರೀತಿಯಿಂದ ಒದಗಿಸಿ ಕೊಡಬೇಕೆಂದು ಶಾಸಕರು ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಎಂ.ಹೊಂಬಾಳೆ ಮೊಳಕಾಲ್ಮುರು