ಮಾರ್ಕಬ್ಬಿನಹಳ್ಳಿಯಲ್ಲಿ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆ.
ಮಾರ್ಕಬ್ಬಿನಹಳ್ಳಿ ಫೆಬ್ರುವರಿ.14
ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮಕ್ಕೆ 17.02.2024 ರಂದು ಮುಂಜಾನೆ ಎಂಟು ಘಂಟೆಗೆ ಗ್ರಾಮಕ್ಕೆ ಸಂವಿಧಾನ ಜಾಗೃತಿ ತೇರು ಆಗಮಿಸಲಿದ್ದು. ಗ್ರಾಮಸ್ಥರು ಎಲ್ಲರೂ ಸೇರಿ ಸ್ವಾಗತ ಮಾಡಬೇಕೆಂದು M.Y ಮಲಕನವರ್ ನೋಡಲ್ ಅಧಿಕಾರಿಗಳು ಹೇಳಿದರು.ಇಡೀ ಗ್ರಾಮಸ್ಥರು ಎಲ್ಲರೂ ಸೇರಿ ಸಂವಿಧಾನ ಜಾಗೃತಿ ಸ್ವಾಗತ ಮಾಡಬೇಕು ಎಂದರು .ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭಿಮನಗೌಡ ಬಿರಾದರ ರವರು ಮಾತನಾಡಿ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಎಲ್ಲಾ ಶಾಲಾ ಮಕ್ಕಳು ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕುಂಭಮೇಳ ಡೊಳ್ಳು ಕುಣಿತ ಕೋಲಾಟ ಮುಂತಾದ ಶಾಲಾ ಮಕ್ಕಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ಎಲ್ಲಾ ಹಿರಿಯರು ನಿಮ್ಮ ಅಭಿಪ್ರಾಯಗಳನ್ನು ಹಾಗೂ ಯಾವ ಕಾರ್ಯಕ್ರಮವನ್ನು ಮಾಡಬೇಕೆಂದು ಎಲ್ಲರ ಅಭಿಪ್ರಾಯಗಳು ನಮಗೆ ಬಹಳ ಮುಖ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರ ಅಭಿಪ್ರಾಯಗಳನ್ನು ತೆಗೆದು ಕೊಂಡು ಈ ಕಾರ್ಯಕ್ರಮವನ್ನು ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ ಈ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕತ್ತಿ ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿಲ್ಲಮ್ಮ ಭಜಂತ್ರಿ. ಗ್ರಾಮ ಪಂಚಾಯಿತಿ ಸದಸ್ಯರಾದ ನೂರಜಾನಭಿ ಬೀಳಗಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯರು ಉಮಾದೇವಿ, ಶಿವಲಿಂಗಪ್ಪ ಹಂದಿಗನೂರು,ಮಹಾಂತೇಶ ಹಾದಿಮನಿ, ನಿಸಾರ ಬೀಳಗಿ,ಶಾಲಾ ಶಿಕ್ಷಕರು ಎಚ್.ಎಸ್.ತಳವಾರ, A.U.ಮಕಾಂದರ, ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಸಿದ್ದು ಇಂಗಳೇಶ್ವರ, ಜುಮಣ್ಣ ಉಕ್ಕಲಿ,ಮಲ್ಲು ಕುಂಬಾರ , ಅಜಯ್ ಮುತ್ತಿಗೆ, ರವಿ ಹಳ್ಳಿ, ಲಕ್ಷ್ಮಣ್ ಭಜಂತ್ರಿ, ಸಿಕಂದ್ರಪ್ಪ ಹಳ್ಳಿ, ಮುಖೇಂದ್ರ ಹಂದಿಗನೂರು, ಹಾಗೂ ಗ್ರಾಮದ ಹಿರಿಯರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:ಮಹಾಂತೇಶ ಹಾದಿಮನಿ, ವಿಜಯಪುರ