ಹೊಸಹಳ್ಳಿ ನಾಡ ಕಚೇರಿಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ.

ಕಾನಾ ಹೊಸಹಳ್ಳಿ ಫೆಬ್ರುವರಿ.16

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ನಾಡಕಚೇರಿಯಲ್ಲಿ ಶ್ರೀ ಸವಿತಾ ಮಹರ್ಷಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಹೊಸಹಳ್ಳಿ ನಾಡ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಕಂದಾಯ ಪರಿ ವೀಕ್ಷಕರಾದ ಬಿ ಮುರಳಿ ಕೃಷ್ಣ ಮಾತನಾಡಿ ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿ. ತಾವು ಹೊಂದಿರುವ ಅಪಾರವಾದ ಜ್ಞಾನ ಭಂಡಾರ. ಬ್ರಹ್ಮಜ್ಞಾನ ದಿಂದ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದಿರುವ ಶ್ರೀ ಸವಿತಾ ಮಹರ್ಷಿಯನ್ನು ಸ್ಮರಿಸಿದರು. ಅವರ ಆದರ್ಶವನ್ನು ನಾಡಿನ ಸಮಾಜದ ಜನರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದರ ಮೂಲಕ ಸದೃಢ ಭಾರತವನ್ನು ನಿರ್ಮಾಣ ಮಾಡಬಹುದು ಎಂದು ಯುವಜನರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಚನ್ನಬಸಯ್ಯ. ಕೊಟ್ರೇಶ್. ಚೈತ್ರ. ಮಮತಾ. ಶ್ರೀನಿವಾಸ ಕೊಂಡಿ.ನಾಡಕಚೇರಿ ಸಿಬ್ಬಂದಿ ಅನಿತಾ ಪೂಜಾರ್. ಗ್ರಾಮದ ಮುಖಂಡರಾದ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರ್ ಸ್ವಾಮಿ. ನಾಗರಾಜ್ ಇಮ್ದಾಪುರ. ಶರಣಪ್ಪ. ರಸೂಲ್ ಸಾಬ್ ತಾಯಕನಹಳ್ಳಿ. ಮಂಜಣ್ಣ.ಸುರೇಶ್ . ತಳವಾರ್ ಬೋರಪ್ಪ. ನಾಡ ಕಚೇರಿ ಆಪರೇಟರ್ಗಳಾದ ಸಿದ್ದೇಶ್. ರಮೇಶ್. ಮಂಜುನಾಥ್. ಸೇರಿ ಸಾರ್ವಜನಿಕರು ಹಾಗೂ ಸವಿತಾ ಸಮಾಜದ ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ಕೆ.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button