ತಾಲೂಕ ಪಂಚಾಯತ ಇ.ಓ ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಹರಿಹಾಯ್ದ – ಗ್ರಾ.ಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಡಗೌಡ್ರ.

ಹುನಗುಂದ ಫೆಬ್ರುವರಿ.16

ಗ್ರಾಮ ಪಂಚಾಯತ ನೌಕರರಿಗೆ ಸರ್ಕಾರ ಕನಿಷ್ಠ ವೇತನ ನಿಗಧಿ ಗೊಳಿಸುವುದು ಮತ್ತು ನಿವೃತ್ತಿಗೊಂಡ ನೌಕರರಿಗೆ ಪಿಂಚಣಿ ಜಾರಿ ಗೊಳಿಸುವುದು ಹಾಗೂ ಇ ಹಾಜರಾತಿ ಹಿಂಪಡೆಯುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ ನೌಕಕರ ಸಂಘ (ಸಿಐಟಿಯು) ಹುನಗುಂದ ಮತ್ತು ಇಳಕಲ್ಲ ಘಟಕ ದಿಂದ ಶುಕ್ರವಾರ ತಾ.ಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಮಹಾಂತೇಶ ಕೋಟಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಗ್ರಾ.ಪಂ ನೌಕರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಡಗೌಡ್ರ ಮಾತನಾಡಿ ಗ್ರಾ.ಪಂಯಲ್ಲಿ ಸುಮಾರು ೨೦ ರಿಂದ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ಪಿಂಚಣಿ ನೀಡಬೇಕು ಅಂತಾ ಸರ್ಕಾರ ಆದೇಶ ಮಾಡಿದರೂ ಕೂಡಾ ಇಲ್ಲಿನ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಹಾಗೂ ತಾ.ಪಂ ಅಧಿಕಾರಿಗಳು ಯಾವದೇ ಜವಾಬ್ದಾರಿಯನ್ನು ತಗೆದುಕೊಂಡು ಕೊಡಿಸುವಂತಾ ಸೌಜನ್ಯತೆಯನ್ನು ತೋರುತ್ತಿಲ್ಲ ಮತ್ತು ಇವತ್ತು ಗ್ರಾ.ಪಂ ಸಿಬ್ಬಂದಿಗಳು ಹೋರಾಟ ಹಮ್ಮಿಕೊಂಡಿದ್ದು ಇವರಿಗೆ ಉತ್ತರ ಕೊಡೋದು ಬರುತ್ತೇ ಅಂತಾ ಎರಡು ತಾ.ಪಂಯಲ್ಲಿ ಗೋಗಲ್ ಮೀಟಿಂಗ್ ಹಮ್ಮಿಕೊಂಡು ಹೋರಾಟವನ್ನು ಹತ್ತಿಕ್ಕುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಾ.ಪಂ ಇ.ಓ ವಿರುದ್ದ ಹರಿಹಾಯ್ದಿದರು.ಅಷ್ಟೆಯಲ್ಲ ಹೋರಾಟವನ್ನು ಹತ್ತಿಕ್ಕುವುದು ಮಾತ್ರ ಅವರಿಗೆ ಗೊತ್ತು ಆದರೆ ಗ್ರಾ.ಪಂ ನೌಕರರ ಹಕ್ಕುಗಳನ್ನು ಕೊಡಿಸುವಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.ಅಲ್ಲದೇ ತಾಲೂಕ ಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಏನು ನಿರ್ವಹಿಸಬೇಕಾಗಿತ್ತು ಅವುಗಳನ್ನು ಸರಿಯಾಗಿ ನಿರ್ವಹಿಸದೇ ಇರೋದರಿಂದ ಈ ರೀತಿ ತಾಲೂಕ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾವೆ ಎಂದು ಆರೋಪಿಸಿದರು.ಕೆಲಸ ಜಾಸ್ತಿ ಕಡಿಮೆ ಸಂಬಳ ಪಡೆಯುವ ಗ್ರಾ.ಪಂ ಸಿಬ್ಬಂದಿಗಳಿಗೆ ಒಂದು ನ್ಯಾಯ ಪಿಡಿಓ ಮತ್ತು ಕಾರ್ಯದರ್ಶಿಗೆ ಇನ್ನೊಂದು ನ್ಯಾಯ ಯಾಕೆ ಈ ರೀತಿ ಮಾಡೋದು ಎಲ್ಲರಿಗೂ ಒಂದೇ ರೀತಿಯ ವ್ಯವಸ್ಥೆಯನ್ನು ಜಾರಿ ಗೊಳಿಸಬೇಕು.ಗ್ರಾ.ಪಂ ನೌಕರರ ೧೫ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಸರ್ಕಾರಕ್ಕೆ ಫೆ.೨೨ ರವರಗೆ ಗಡವು ನೀಡಿದ್ದು ಅಷ್ಟರಲ್ಲಿ ಬಗೆ ಹರಿಸದಿದ್ದರೇ ಮತ್ತೇ ಫೆ.೨೨ ರಿಂದ ಬೆಂಗಳೂರನಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾ.ಪಂ ನೌಕರರ ಸಂಘದ ತಾಲೂಕಾಧ್ಯಕ್ಷ ಮಾರುತಿ ಚನ್ನದಾಸರ ಮಾತನಾಡಿ ಗ್ರಾ.ಪಂ ಸಿಬ್ಬಂದಿಗಳಿಗೆ ೩೧ ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು,ಆರ್ಥಿಕ ಇಲಾಖೆಯಿಂದ ಒಪ್ಪಿಗೆಯಂತೆ ಸಿಬ್ಬಂದಿಗಳಿಗೆ ೬ ಸಾವಿರ ಪಿಂಚಣಿ ಕೊಡಬೇಕು,ಇ ಹಾಜರಾತಿಯನ್ನು ತಕ್ಷಣವೇ ಹಿಂಪಡೆಯುವುದು,ಕರ ವಸೂಲಿಗಾರ ಮತ್ತು ಕ್ಲಾರ್ಕ್ ಕಂ ಡಿಇಓ ನೌಕರರನ್ನು ನೇರ ನೇಮಕಾತಿಯ ಮೂಲಕ ಲೆಕ್ಕ ಸಹಾಯಕ ಗ್ರೇಡ್.೧ ಮತ್ತು ಗ್ರೇಡ್ ೨ ಕಾರ್ಯದರ್ಶಿ ಮತ್ತು ಪಿಡಿಓ ಹುದ್ದೆಗೆ ಮುಂಬಡ್ತಿ ಕೋಟ್ ಹೆಚ್ಚಿಸಬೇಕು,ಮುರಡಿ ಗ್ರಾ.ಪಂಯಲ್ಲಿ ಅಕ್ರಮ ಸಿಬ್ಬಂದಿ ನೇಮಕವಾಗಿದ್ದು ಅದನ್ನು ತಕ್ಷಣವೇ ವಜಾ ಗೊಳಿಸಬೇಕು.ಸಿಬ್ಬಂದಿಗಳ ಬಾಕಿ ವೇತನವನ್ನು ಬಿಡುಗಡೆ ಗೊಳಿಸಬೇಕು ಬಾಕಿ ಅನುಮೋಧನೆಯಾಗದೇ ಇರುವ ಸಿಬ್ಬಂದಿಗಳನ್ನು ಏಕಕಾಲದಲ್ಲಿ ಜಿ.ಪಂಚಾತಿಯಿಂದ ಅನಮೋಧನೆ ನೀಡಬೇಕೆಂದು ಒತ್ತಾಯಿಸಿದರು.ಗ್ರಾ.ಪಂ ನೌಕರರು ಶುಕ್ರವಾರ ವಿವಿಧ ಬೇಡಕೆ ಈಡೇರಿಕೆಗಾಗಿ ಪಟ್ಟಣದ ಬಸವ ಮಂಟಪ ದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ರ‍್ಯಾಲಿ ನಡೆಸಿ ತಾ.ಪಂಯಲ್ಲಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಇಳಕಲ್ಲ ತಾಲೂಕಾಧ್ಯಕ್ಷ ಶರಣಪ್ಪ ವಾಲಿಕಾರ,ಕಾರ್ಯದಶಿಗಳಾದ ಬಸವರಾಜ ಬಳಬಟ್ಟಿ,ಸಂಗಮೇಶ ರಾಯನಗೌಡ್ರ,ಮಂಜು ತುಪ್ಪದ,ಯಮನಪ್ಪ ಮ್ಯಾಗೇರಿ,ಮಂಜುನಾಥ ಮೇಟಿ,ಶರಣು ಶಿರೂರ,ಶರಣಪ್ಪ ಅಂಗಡಿ,ಶಿಲ್ಪಾ ಅಗಸಿಮುಂದಿನ,ರೇಶ್ಮಾ ಖಜಗಲ್ಲ,ಮರಿಯವ್ವ ಚಲವಾದಿ,ಯಮನವ್ವ ಮಾದರ,ಸವಿತಾ ಚಲವಾದಿ,ದ್ರಾಕ್ಷಾಯಿಣಿ ಡೊಂಳಿಣ.ಶಿವಲೀಲಾ ಕಳ್ಳಿಮಠ,ಸಂಗಮೇಶ ಅಗಸಿಮುಂದಿನ ಸೇರಿದ್ದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button