ಕರ್ನಾಟಕ ಸಂಭ್ರಮ – 50 ಜ್ಯೋತಿ ರಥ ಯಾತ್ರೆಯಲ್ಲಿ ಪಾಲ್ಗೊಂಡ ನಂದವಾಡಗಿ ಶಾಲಾ ಮಕ್ಕಳು.
ನಂದವಾಡಗಿ ಫೆಬ್ರುವರಿ.16
![](https://i0.wp.com/sknewskannada.in/wp-content/uploads/2024/02/IMG-20240214-WA00513-1024x683.jpg?resize=708%2C472&ssl=1)
ಹುನಗುಂದ ಸಮೀಪದ ನಂದವಾಡಗಿಯಲ್ಲಿ ಕರ್ನಾಟಕ – 5೦ ರ ಸಂಭ್ರಮದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ನಂದವಾಡಗಿ ಗ್ರಾಮ ಪಂಚಾಯತ ಸದಸ್ಯರು ಶ್ರೀಮತಿ ಸರಸ್ವತಿ ಈಟಿ ಮೇಡಂ ಕನ್ನಡಮ್ಮನ ತೇರಿಗೆ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ಮಾಡಿ ಕೊಂಡರು. ಈ ಒಂದು ಸಂಭ್ರಮದಲ್ಲಿ ನಂದವಾಡಗಿಯ ಎಲ್ಲಾ ಶಾಲಾ ಮಕ್ಕಳು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿದರು. ಮಕ್ಕಳಿಂದ ಕನ್ನಡ ನಾಡಿನ ಮಹಾನ್ ವ್ಯಕ್ತಿಗಳ ಛದ್ಮವೇಷಧಾರಿ,ನೃತ್ಯ,ಕನ್ನಡ ನೆಲ -ಜಲ – ನಾಡಿನ ಘೋಷಣಾ ಫಲಕಗಳು, ಡೊಳ್ಳು ಕುಣಿತ, ಕುಂಭ ಮೇಳದೊಂದಿಗೆ ಕನ್ನಡಮ್ಮ ತೇರನ್ನು ಊರಿನಲ್ಲಿ ಮೆರವಣಿಗೆ ಮಾಡುವ ಮೂಲಕ ಮೆರುಗು ತಂದರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎಲ್ಲಾದರೂ ಇರು, ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು, ಕನ್ನಡ ನಾಡಿನ ವಾಸ್ತುಶಿಲ್ಪ, ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ದ ಚಿತ್ರ ಮೆರವಣಿಗೆಗೆ ಸಾಕ್ಷಿಯಾಯಿತು. ಈ ಒಂದು ರಥ ಯಾತ್ರೆಯಲ್ಲಿ ತಾಲೂಕಿನ ಅಧಿಕಾರಿಗಳ ವರ್ಗ, ಗ್ರಾಮ ಪಂಚಾಯತ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ನಂದವಾಡಗಿ ಗ್ರಾಮದ ಸಮಸ್ತ ನಾಗರಿಕ ಬಂಧುಗಳು, ಎಲ್ಲಾ ಶಾಲೆಯ ಮುಖ್ಯ ಗುರುಗಳು, ಶಿಕ್ಷಕ ವರ್ಗ, ಮುದ್ದು ಮಕ್ಕಳು ಹಾಜರಿದ್ದರು. ನಂದವಾಡಗಿಯ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ, ವಿದ್ಯಾರ್ಥಿನಿಯರು ಹಾಜರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ