ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಗೆ ಪೂರ್ವ ಸಿದ್ಧತೆ.
ಕೊಟ್ಟೂರು ಫೆಬ್ರುವರಿ.19
![](https://i0.wp.com/sknewskannada.in/wp-content/uploads/2024/02/IMG-20240219-WA0050-1024x768.jpg?resize=708%2C531&ssl=1)
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ನಡೆಯಲಿರುವ ಶ್ರೀ ಗುರುಬಸವೇಶ್ವರ ರಥೋತ್ಸವದ ಅಂಗವಾಗಿ ದಿ: 19.02.2024 ಸೋಮವಾರ ದಂದು ಮುಂಜಾಗ್ರತೆ ವಹಿಸಿ ಪಟ್ಟಣದ ಕೂಡ್ಲಿಗಿ ರಸ್ತೆ, ಉಜ್ಜಿನಿ ರಸ್ತೆ, ಇಟ್ಟಿಗಿ ರಸ್ತೆ, ಹಗರಿ ಬೊಮ್ಮನಹಳ್ಳಿ ರಸ್ತೆ, ಚಿರಿಬಿ ರಸ್ತೆ ಮತ್ತು ಹರಪನಹಳ್ಳಿ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಸಿದ್ದ ಪಡಿಸಲಾಗಿದೆ.
![](https://i0.wp.com/sknewskannada.in/wp-content/uploads/2024/02/IMG-20240219-WA0049-768x1024.jpg?resize=708%2C944&ssl=1)
ಜಾತ್ರೆ ವಿಜೃಂಭಣೆಯಿಂದ ನಡೆಯಲಿರುವದರಿಂದ ಈ ಹಿಂದೆ ಎರಡು ಬಾರಿ ಜಾತ್ರೆ ಹೇಗಿರುತ್ತದೆ ಎಂಬ ತಿಳಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಎ ನಸುರುಲ್ಲಾ ರವರು ತುಂಬಾ ಸ್ವಚ್ಛ ಹಾಗೂ ಅಚ್ಚು ಕಟ್ಟಾದ ವ್ಯವಸ್ಥೆಗೆ ಮುಂದಾಗಿದ್ದಾರೆ.ಇವರ ಜೊತೆ ಸಿಬ್ಬಂದಿ ವರ್ಗವು ಸಹ ಸ್ವಚ್ಛತೆಯಲ್ಲಿ ತೊಡಗಿದ್ದಾರೆ ಇದೇ ರೀತಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮಗ್ರ ಸಿದ್ಧತೆ ಜೊತೆಗೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಕೊಟ್ಟೂರಿನ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಆಶಯವಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು