ಆಂತರಗಟ್ಟೆ ಅಮ್ಮನ ಹಬ್ಬದ ಪ್ರಯುಕ್ತ ಕರಿಯಮ್ಮ ದೇವಿ ಮೆರವಣಿಗೆ.
ತರೀಕೆರೆ ಫೆಬ್ರುವರಿ.22
![](https://i0.wp.com/sknewskannada.in/wp-content/uploads/2024/02/IMG-20240222-WA00601-1024x1004.jpg?resize=708%2C694&ssl=1)
ತರೀಕೆರೆ ಪಟ್ಟಣದ ಬಿಳಿ ಮಗ್ಗದ ಬೀದಿಯ ಕುರುವಿನ ಶೆಟ್ಟಿ ಯುವಕರ ಸಂಘದಿಂದ ಅಂತರಗಟ್ಟೆ ಅಮ್ಮನ ಹಬ್ಬ ಮತ್ತು ಜಾತ್ರೆಯ ಪ್ರಯುಕ್ತ ಕರಿಯಮ್ಮ ದೇವಿಯ ಪೂಜಾ ಮಹೋತ್ಸವ ಹಾಗೂ ಮೆರವಣಿಗೆ ಅದ್ದೂರಿಯಿಂದ ನಡೆಸಲಾಯಿತು. ಗೊಂಬೆ ಮೇಳ, ವೀರಗಾಸೆ, ಕಲಾ ತಂಡಗಳೊಂದಿಗೆ ತರೀಕೆರೆ ಪಟ್ಟಣದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗುರುವಿನ ಶೆಟ್ಟಿ ಯುವಕರ ಸಂಘದ ಅಧ್ಯಕ್ಷರಾದ ಸಿದ್ದೇಶ್, ಆರ್ಯ ಈಡಿಗ ಸಮಾಜದ ಮುಖಂಡರಾದ ರಾಘವೇಂದ್ರ, ವಾರ್ಡ್ ಸದಸ್ಯರಾದ ಪಾರ್ವತಮ್ಮ ಶುಭಕೋರಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ