ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪೂರ್ವಭಾವಿ ಸಭೆ.

ಕೊಟ್ಟೂರು ಫೆಬ್ರುವರಿ.26

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 26-02-2024 ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ 50 ನೇ. ವರ್ಷದ ಸಂಸ್ಥಾಪನ ದಿನದ ಸಂಭ್ರಮೋತ್ಸವಕ್ಕೆ ದುರ್ಗೇಶ್ ಜಿಲ್ಲಾ ಸಂಚಾಲಕರು ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಯಿತು.ಡಾ. ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ರಿ.ನಂ.47/74-75 ರ ಸಂಘಟನೆ ಜನವರಿ 24 ನೇ. ತಾರೀಕಿಗೆ 50 ನೇ. ವರ್ಷ ಪೂರ್ಣ ಗೊಳ್ಳುತ್ತದೆ ಆದ್ದರಿಂದ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 09 – 02-2024 ರಂದು 50 ನೇ. ವರ್ಷದ ಸಂಸ್ಥಾಪನಾ ದಿನದ ಸಂಭ್ರಮೋತ್ಸವದ ಪೂರ್ವಭಾವಿ ಸಭೆಯಲ್ಲಿ ದಿನಾಂಕ,ಸ್ಥಳ ಹಾಗೂ ಆ ದಿನ ನಡೆಯಬೇಕಾದ ಪೂರ್ವ ಸಿದ್ಧತೆಗಳನ್ನು ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ತೆಗ್ಗಿನಕೇರಿ ಕೊಟ್ರೇಶ್ ಜಿಲ್ಲಾ ಸಂಚಾಲಕರು ಜಿಲ್ಲಾ ಸಂಘಟನಾ ಸಂಚಾಲಕರಗಳಾದ ಪರಶುರಾಮ್ ಕಂದಗಲ್ಲು ತುಂಬರಗುದ್ದಿ ದುರ್ಗೇಶ್ ನಾಗರಾಜ್ ಮತ್ತು ತಾಲೂಕು ಸಂಚಾಲಕರಗಳಾದ ತೆಗ್ಗಿನಕೇರಿ ಹನುಮಂತಪ್ಪ ಮಹೇಶ್ ಕೂಡ್ಲಿಗಿ ಗಂಗಾಧರ ಹೊಸಹಳ್ಳಿ ಹಾಗೂ ತಾಲೂಕು ಸಂಘಟನಾ ಸಂಚಾಲಕರಾದ ಶಿವರಾಜ್ ಬಿ ನಗರ ಘಟಕದ ಅಧ್ಯಕ್ಷರಾದ ಪರಶುರಾಮ್ ಬಿ ಕೊಲ್ಲರಪ್ಪ ಮುಗಪ್ಪ ಕೆ ಸುರೇಶ್ ಕೊಟ್ರೇಶ್ ಕುಮಾರ್ ಮಾತನಾಡುಕು ಜಿತೇಂದ್ರ ನಾಗರಾಜ್ ಅಜಿತ್ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button