ರಾಮ ಮನಗೂಳಿ ಅವರ ನಿಧನ, ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ – ದರ್ಗಾದ.

ಹುನಗುಂದ ಮಾರ್ಚ್.3

ಬಾಗಲಕೋಟಿ ಜಿಲ್ಲೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನದ ಹಿನ್ನೆಲೆಯಲಿ ಹುನಗುಂದ ಕಾರ್ಯ ನಿರತ ಪತ್ರಕರ್ತರ ಸಂಘ ದಿಂದ ಶ್ರದ್ದಾಂಜಲಿಯನ್ನು ಸಲ್ಲಿಸುವ ಮೂಲಕ ನುಡಿ ನಮನವನ್ನು ಅರ್ಪಿಸಲಾಯಿತು.ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿ.ರಾಮ ಮನಗೂಳಿ ಅವರ ಶ್ರದ್ದಾಂಜಲಿ ಸಭೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ದರ್ಗಾದ ಮಾತನಾಡಿ ದಿ.ರಾಮ ಮನಗೂಳಿ ಪತ್ರಿಕಾರಂಗಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು, ಬಾಗಲಕೋಟ ಜಿಲ್ಲೆ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಅವರು ಬರೆದ ದಿಟ್ಟ ವರದಿಗಳು ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳ ಕಣ್ಣುತೆರೆಸುವ ಕಾರ್ಯ ಮಾಡಿದರು. ಜೊತೆಗೆ ಯುವ ಪತ್ರಕರ್ತರಿಗೆ ಮಾರ್ಗ ದರ್ಶಕರಾಗಿದ್ದರು.೪೦ ವರ್ಷ ಪತ್ರಿಕಾ ರಂಗದಲ್ಲಿ ಅವರ ಅಗಾಧವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ ದಿ.ರಾಮ ಮನಗೂಳಿ ಅವರ ನಿಧನ ಪತ್ರಿಕಾ ರಂಗಕ್ಕೆ ನಷ್ಟವುಂಟಾಗಿದೆ.ರಾಮ ಮನಗೂಳಿಯವರು ಪತ್ರಿಕಾ ರಂಗದಲ್ಲಿ ಬಾಗಲಕೋಟಿ ಸೇರಿದಂತೆ ಅನೇಕ ಮುಳಗಡೆಯ ಪ್ರದೇಶಗಳ ಜ್ವಲಂತ ಸಮಸ್ಯೆಗಳ ಕುರಿತು ವರದಿಯನ್ನು ಬರೆದು ಸಂತ್ರಸ್ಥರ ಸಂಕಷ್ಟವನ್ನು ಪರಿಹರಿಸುವ ಕಾರ್ಯವನ್ನು ಮಾಡುವ ಮೂಲಕ ಜಿಲ್ಲೆಯ ಹೆಸರಾಂತ ಪತ್ರಕರ್ತರಾಗಿದ್ದರು ಎಂದರು.ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ,ವೀರೇಶ ಕುರ್ತಕೋಟಿ, ಮಹಾಂತೇಶ ತೋಪಲಕಟ್ಟಿ, ಸಂಗಮೇಶ ಹೂಗಾರ,ಚಂದ್ರು ಗಂಗೂರ,ಬಸವರಾಜ ಬಡಿಗೇರ,ಜಗದೀಶ ಹದ್ಲಿ, ರಮೇಶ ತಾರಿವಾಳ, ಮಲ್ಲಿಕಾರ್ಜುನ ಬಂಡರಗಲ್ಲ,ಅಶೋಕ ಹಂದ್ರಾಳ.ರಿಯಾಜ ಸರಕಾವಸ ಸೇರಿದ್ದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button