ಲಕ್ಷಾಂತರ ಭಕ್ತಾದಿಗಳಿಂದ ವಿಜೃಂಭಣೆ ಮೆರೆದ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ.
ಕೊಟ್ಟೂರು ಮಾರ್ಚ್.4

ವಿಜಯನಗರ ಜಿಲ್ಲೆಯ ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ಹಿರೇಮಠ ದಿಂದ ಕೊಟ್ಟೂರೇಶ್ವರ ಮೂರ್ತಿಯು ಸಮಾಳ ನಂದಿಕೋಲು ಸಕಲ ವಾದ್ಯಗಳೊಂದಿಗೆ ಸಾಗುತ್ತಾ ಅಂಬೇಡ್ಕರ್ ನಗರದಲ್ಲಿ ದಲಿತ ಮಹಿಳೆಯಿಂದ ಗಿಣ್ಣದ ಎಡೆ ನೈವೇದ್ಯ ಪಡೆದು ನಂತರ ರಥವನ್ನು ಏರಿ ವಿಜೃಂಭಣೆಯಿಂದ ನಡೆದ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ.ಜಾತ್ಯಾತೀತ ಜಾತ್ರೆ ಶ್ರೀ ಗುರು ಕೊಟ್ಟೂರೇಶ್ವರ ಅನೇಕ ನಾಮಗಳನ್ನು ಹೊಂದಿರುವ ಮತ್ತು 60 ಅಡಿ ಎತ್ತರದ ತೇರು ಸುಮಾರು 6 ಲಕ್ಷಕ್ಕೂ ಹೆಚ್ಚು ಸರ್ವ ಜನಾಂಗದವರು ಸೇರಿ ಪ್ರತಿ ವರ್ಷದಂತೆ ಮೂಲ ನಕ್ಷತ್ರ ಸಮಯಕ್ಕೆ ಈ ವರ್ಷ 5 ಗಂಟೆ 25 ನಿಮಿಷಕ್ಕೆ ರಥವು ತಾನಾಗಿಯೇ ಒಂದು ಹೆಜ್ಜೆ ಸಾಗುತ್ತದೆ ಇಂಥ ಅಪರೂಪದ ಕ್ಷಣವನ್ನು ನೋಡಲು ಭಕ್ತರು ಘೋಷಣೆಯೊಂದಿಗೆ ಕಾದು ನಿಲ್ಲುತ್ತಾರೆ. ಸಮಯಕ್ಕೆ ತಕ್ಕಂತೆ ಮೂಲ ನಕ್ಷತ್ರ ಕೊಟ್ಟೂರೇಶ್ವರನ ಪವಾಡವಾಗುತ್ತದೆ ನಂತರ ಮದ್ಯಪಾನ ಸೇವನೆ ಮಾಡಿದ ವ್ಯಕ್ತಿ ರಥದ ಗಡ್ಡೆಯಲ್ಲಿ ಕೂತಿದ್ದನಂತೆ ಅದಕ್ಕೆ ಹಗ್ಗಹರಿದು 30 ನಿಮಿಷ ತಡವಾಯಿತು ನಂತರ ಆ ವ್ಯಕ್ತಿಯನ್ನು ಕೆಳಗೆ ಇಳಿಸಿದರಂತೆ ರಥವು ಮುಂದಕ್ಕೆ ಸಾಗಿತು ಇದು ಕೊಟ್ಟೂರೇಶ್ವರನ ಪವಾಡ.ಶ್ರೀ ಕೊಟ್ಟೂರೇಶ್ವರನಲ್ಲಿ ತಮ್ಮ ತಮ್ಮ ಕೋರಿಕೆಯನ್ನು ಕೇಳುತ್ತಾ ಮಕ್ಕಳಿಲ್ಲದವರು ಮಕ್ಕಳನ್ನು ಆರೋಗ್ಯವನ್ನು ಮತ್ತು ಸಕಲ ಬೇಡಿಕೆಗಳನ್ನು ಇಟ್ಟು ಪಾದಯಾತ್ರೆ ಪ್ರಸಾದ ನೀಡುವುದರ ಮೂಲಕ ಅರಿಕೆಗಳನ್ನು ದೀಡು ನಮಸ್ಕಾರ ಇತ್ಯಾದಿ ದಾನ ಮಾಡುವುದರ ಮೂಲಕ ತಮ್ಮ ಕೋರಿಕೆಗಳನ್ನು ಈಡೇರಿಸುತ್ತಾರೆ ಎಂದುಕೊಟ್ಟೂರೇಶ್ವರನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ಮುಸ್ಲಿಂ ಜನಾಂಗದವರು ಸಹ ತಮ್ಮ ಬೇಡಿಕೆಗಳನ್ನು ಕೋರುತ್ತಾರೆ. ಇವರೆಲ್ಲರನ್ನು ಸುಖ ಶಾಂತಿ ನೆಮ್ಮದಿ ಕೊಡುತ್ತಾ ಬಂದಿದ್ದಾರೆ ಶ್ರೀ ಕೊಟ್ಟೂರೇಶ್ವರ ಸ್ವಾಮಿಗಳು,ದಾವಣಗೆರೆ ಚಿತ್ರದುರ್ಗ ಹಾಸನ ಗದಗ ಹಾವೇರಿ, ಬಳ್ಳಾರಿ ಅನೇಕ ಜಿಲ್ಲೆಗಳಿಂದ 20 ವರ್ಷಗಟ್ಟಲೆ ಪ್ರತಿವರ್ಷ ಪಾದಯಾತ್ರೆ ಬರುತ್ತೇವೆ ನಾವು ಬೇಡಿದ ಎಲ್ಲಾ ಬೇಡಿಕೆಗಳು ಈಡೇರುತ್ತವೆ ಎಂದು ಜನಸಾಗರವೇ ಕೊಟ್ಟೂರೇಶ್ವರ ರಥೋತ್ಸವಕ್ಕೆ ಸೇರಿದ್ದರು.ಮಾನ್ಯ ಜಿಲ್ಲಾಧಿಕಾರಿಗಳಾದ ಎಂ ಎಸ್ ದಿವಾಕರ್ ದಿನಾಂಕ 3 ಮಾರ್ಚ್ 2024 ರಂದು ರಾತ್ರಿ 8 ಗಂಟೆಗೆ ಕೆ ಅಯ್ಯನಹಳ್ಳಿಯಿಂದ ಕೊಟ್ಟೂರಿಗೆ ಪಾದಯಾತ್ರೆ ಮಾಡುವುದರ ಮೂಲಕ ಬಂದಂತ ಭಕ್ತಾದಿಗಳಿಗೆ ಸಕಲವನ್ನು ಪಾಲಿಸಲಿ ಎಂದು ಶ್ರೀ ಗುರು ಕೊಟ್ಟೂರೇಶ್ವರನಲ್ಲಿ ಪ್ರಾರ್ಥನೆ ಮಾಡಿ ಕೊಂಡರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು