ಶ್ರೀಶಾರದಾಶ್ರಮದಲ್ಲಿ ನನ್ನ ತಾಯಿ ಶಾರದೆ – ಉಪನ್ಯಾಸ ಮಾಲಿಕೆ.
ಚಳ್ಳಕೆರೆ ಏ.07

ಚಳ್ಳಕೆರೆಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ನನ್ನ ತಾಯಿ ಶಾರದೆ” ಎಂಬ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಆಶ್ರಮದ ಸ್ವಯಂ ಸೇವಕರಾದ ಸಂತೋಷ ಕುಮಾರ್ ಅಗಸ್ತ್ಯ ಅವರು ನಡೆಸಿ ಕೊಟ್ಟರು. ನಗರದ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಶ್ರೀಶಾರದಾಶ್ರಮದಲ್ಲಿ ಹಮ್ಮಿಕೊಂಡಿದ್ದ ‘ವ್ಯಕ್ತಿತ್ವ ನಿರ್ಮಾಣಕಾರಿ’ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀಮಾತೆ ಶಾರದಾದೇವಿ ಅವರ ಮನೆಯಲ್ಲಿ ನಡೆಯುತ್ತಿದ್ದ “ಜಗದ್ಧಾತ್ರಿ ಪೂಜೆ” ಯ ಬಗ್ಗೆ ಮಾತನಾಡಿದರು.

ಈ ಉಪನ್ಯಾಸದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ, ಶ್ರೀವತ್ಸ ಅವರು ಶ್ರೀಮದ್ ಭಗವದ್ಗೀತೆಯ 12 ನೇ. ಅಧ್ಯಾಯವಾದ ಭಕ್ತಿಯೋಗದ ಶ್ಲೋಕಗಳನ್ನು ಪಠಿಸಿದರು. ಈ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನವನ್ನು ಹೇಳಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ ಶಾಂತಕುಮಾರ್, ದೊಡ್ಡಜ್ಜಯ್ಯ, ಮಂಜುಳ ಉಮೇಶ್, ದೀಪ ರಾಘವೇಂದ್ರ, ಮನೀಷ್, ಡಾ, ಭೂಮಿಕ, ಚೇತನ್, ಚೆನ್ನಕೇಶವ, ಋತ್ವಿಕ್, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.