ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ.
ಸಿಂದಗಿ ಮಾರ್ಚ್.5

ಇಂದು ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಗಂಗಾ ಕಲ್ಯಾಣ ಬೋರ್ ವೆಲ್ ಎಸ್ಸಿ/ಎಸ್ಟಿ 2022.2023 ಸಾಲಿನ ಫಲಾನುಭವಿಗಳು ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಂಪೂರ ಆರೂಢ ಮಠದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿವರೆಗೆ ಬಂದು ಸುಮಾರು ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ ಭೂಸನೂರ ದೀನ ದಲಿತರಿಗೆ ಸ್ಥಳೀಯ ಶಾಸಕರು ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಹಾಗೂ ಇದೆ ರೀತಿ ದ್ವೇಷದ ರಾಜಕಾರಣ ಮಾಡಿದರು ಇನ್ನೂ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕು ಎಂದು ಶಾಸಕರಿಗೆ ಎಚ್ಚರಿಕೆ ನೀಡಿದರು.

ಮತ್ತು ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ ಈ ತಾಲ್ಲೂಕಿನ ಹಳೆಯ ಕಾಮಗಾರಿ ಹಾಗೂ ಟೆಂಡರ್ ರದ್ದು ಮಾಡುವ ಪ್ರವೃತ್ತಿ ಬಿಡಬೇಕು ಫಲಾನುಭವಿಗಳಿಗೆ ಅನ್ಯಾಯ ಮಾಡಿದರು ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಿದ್ದು ಬುಳ್ಳಾ ಗುರು ತಳವಾರ ಶ್ರೀಕಾಂತ ಬಿಜಾಪುರ ಶಂಕರ ಬಗಲಿ ಮಾತನಾಡಿದರು ಈ ಸುದ್ದಿಯನ್ನು ರವಿ ನಾಯ್ಕೋಡಿ ಶಿವನಗೌಡ ಬಿರಾದಾರ ಪ್ರಶಾಂತ ಕದ್ದರಕಿ ಸಂತೋಷ ಮಣಗೀರಿ ಪೀರೂ ಕೆರೂರ ನಾಗಪ್ಪ ಶಿವೂರ ಸಿದ್ರಾಮ ಆನಗೋಂಡ ಮಡಿವಾಳಪ್ಪಗೌಡ ಬಿರಾದಾರ ಶ್ರೀಶೈಲ ಚಳ್ಳಗಿ ಮಲ್ಲನಗೌಡ ಬಿರಾದಾರ ಯಲ್ಲು ಇಂಗಳಗಿ ಪ್ರಧಾನಿ ಮೂಲಿಮನಿ ಶಮೀ ಬಿಜಾಪುರ ವಿಠಲ ಪೂಜಾರಿ ರಜಾಕ ಮುಜಾವರ ಕಾಜು ಬಂಕಲಗಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ