ನಿಧನ ವಾರ್ತೆ:ಅರುಣಾಚಾರಿ ತೂಲಹಳ್ಳಿ ಬೈಕ್ ಅಪಘಾತದಲ್ಲಿ ಸಾವು.

ವಿಜಯನಗರ ಜಿಲ್ಲೆಯ, ಕೊಟ್ಟೂರು ತಾಲೂಕಿನ ಕೊಟ್ಟೂರು ರಥೋತ್ಸವ ಮುಗಿಸಿ ಕೊಂಡು 4 ಮಾರ್ಚ್ 2024 ಸೋಮವಾರ ರಾತ್ರಿ 8 ಗಂಟೆಗೆ ಕೊಟ್ಟೂರಿನಿಂದ ತೂಲಹಳ್ಳಿಗೆ ಹಿಂದಿರುಗುವಾಗ ಅರುಣಾಚಾರಿ ಎಂಬ ಯುವಕ ಬೈಕ್ ಸವಾರಿ ಮಾಡಿ ಕೊಂಡು ದಾರಿಯಲ್ಲಿ ರಸ್ತೆ ಅಪಘಾತವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಇನ್ನೋರ್ವ ಯುವಕ ಕೊಟ್ಟೂರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನು ಹರಪನಹಳ್ಳಿ ಕಾಲೇಜಿನಲ್ಲಿ ಬಿ.ಎ ಪ್ರಥಮ ವರ್ಷ ವಿದ್ಯಾರ್ಥಿಯಾಗಿದ್ದು ಈತನ ತಂದೆ ವೀರಭದ್ರಚಾರಿ ತಾಯಿ ಕೊಟ್ಟರಮ್ಮ ಈತನು ಒಬ್ಬನೇ ಮಗನಾಗಿದ್ದನು.ಇವರು ತುಂಬಾ ಬಡವರಿದ್ದು ಕುಟುಂಬದವರಿಗೆ ಬರಿಸಲಾಗದ ನೋವು ಉಂಟಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು