ಬೆಲೆನಹಳ್ಳಿ ಪಿಡಿಒ ಮತ್ತು ಆರ್.ಡಿ.ಓ ವರ್ಗಾವಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ.
ತರೀಕೆರೆ ಮಾರ್ಚ್.6
![](https://i0.wp.com/sknewskannada.in/wp-content/uploads/2024/03/IMG-20240306-WA0022.jpg?resize=708%2C398&ssl=1)
ಪಂಚಾಯಿತಿಯಲ್ಲಿ ಇ-ಸ್ವತ್ತು ಕೊಡಲು ಸತಾಯಿಸುತ್ತಾರೆ ಎಂದು ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಂತ್ ಕುಮಾರ್ ನಾಯಕ್ ಆರೋಪಿಸಿದರು. ಅವರು ಇಂದು ಬೆಲೆನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಏರ್ಪಡಿಸಿದ್ದ ಪಿಡಿಒ ಮತ್ತು ಆರ್.ಡಿ.ಓ ವರ್ಗಾವಣೆಗೆ ಒತ್ತಾಯಿಸಿ ನಡೆಸಿದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು. ಉಪಾಧ್ಯಕ್ಷರಾದ ಶ್ರುತಿ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಸದಸ್ಯರಾದ ಕುಮಾರಯ್ಯ ಮಾತನಾಡಿ ಸರ್ವೆ ನಂಬರ್ 18 ರಲ್ಲಿ ಎರಡು ಮನೆಗಳಿಗೆ ಇ-ಸ್ವತ್ತು ಕೊಟ್ಟಿದ್ದಾರೆ ಉಳಿದವರಿಗೆ ಯಾಕೆ ಕೊಡುತ್ತಿಲ್ಲ. ಇವರ ಈ ಮಲತಾಯಿ ಧೋರಣೆ ಯಿಂದ ಚುನಾಯಿತ ಸದಸ್ಯರ ಮೇಲೆ ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಮಾಜಿ ಉಪಾಧ್ಯಕ್ಷರಾದ ನಾಗರಾಜ್ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಯಾವುದೇ ರೀತಿಯಲ್ಲಿಯೂ ಕ್ರಮ ವಹಿಸುತ್ತಿಲ್ಲ ಪಿಡಿಒ ಮತ್ತು ಆರ್.ಡಿ.ಓ ರವರನ್ನು ವರ್ಗಾವಣೆ ಮಾಡಿರಿ ಎಂದು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಮತ್ತು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆ ಮಾಡಲಾಯಿತು. ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಯೋಗೀಶ್ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆರೋಪಗಳನ್ನು ಆಲಿಸಿ ಬರಗಾಲ ಘೋಷಣೆ ಯಾಗಿರುವುದರಿಂದ ಟಾಸ್ಕ್ ಫೋರ್ಸ್ ನಲ್ಲಿ ಅನುಮತಿ ಪಡೆದು ಜಿಪಿಎಸ್ ಅಳವಡಿಸಿದ ಟ್ಯಾಂಕರ್ ನಲ್ಲಿ ನೀರು ಒದಗಿಸಬೇಕಾಗಿದೆ. ವಸತಿ ಯೋಜನೆ ಬಿಲ್ಲು ಬಂದಿಲ್ಲ ಎಂಬ ಬಗ್ಗೆ ನಮಗೆ ಯಾರು ಸಹ ಅರ್ಜಿ ಕೊಟ್ಟಿಲ್ಲ ನೀವು ಅರ್ಜಿ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ ನೀರಿನ ದುರ್ಬಳಕೆ ಕುರಿತು ಚರ್ಚಿಸುತ್ತಾರೆ ಎಂದು ಹೇಳಿದರು. ಧರಣಿ ಸತ್ಯಾಗ್ರಹ ನಡೆಸುತ್ತಿರುವುದರಿಂದ ಮನವಿ ಸ್ವೀಕರಿಸಿ ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ. ಸಾರ್ವಜನಿಕರ ದೂರುಗಳ ಬಗ್ಗೆ ಪಿಡಿಒ ಶಿವಮೂರ್ತಿ ರವರನ್ನು ಪತ್ರಿಕೆ ಮಾತನಾಡಿಸಿದಾಗ ಪ್ರತಿಭಟನಾ ಸ್ಥಳಕ್ಕೆ ಇಲಾಖೆಯ ಮೇಲಧಿಕಾರಿಗಳಾದ ಸಹಾಯಕ ನಿರ್ದೇಶಕರು ಎಲ್ಲಾ ಆರೋಪಗಳ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಸತ್ಯಾಸತ್ಯತೆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ