ರಾಂಪುರ ಮತ್ತು ಮುತ್ತಿಗೆರಹಳ್ಳಿ ಗ್ರಾಮದಲ್ಲಿ ದನ ಕರುಗಳಿಗೆ ಮೇವು ನೀರು ಒದಗಿಸಿದ – ಶಾಸಕರು.

ರಾಂಪುರ ಮಾರ್ಚ್.6

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಹೋಬಳಿಯ ರಾಂಪುರ ಗ್ರಾಮದಲ್ಲಿ ಎಪಿಎಂಸಿ ಮಾರ್ಕೆಟ್ ನಲ್ಲಿ ಗೋಶಾಲೆ ಚಾಲನೆ ನೀಡಿದ ಶಾಸಕರು ಮೊಳಕಾಲ್ಮೂರು ತಾಲೂಕು ಬರಗಾಲ ಎಂದು ಘೋಷಣೆಯಾದ ತಕ್ಷಣ ಮೊದಲಿನ ಆದ್ಯತೆ ದನ ಕರುಗಳಿಗೆ ಮೇವು ನೀರು ಕೃಷಿಕರ ಜನಗಳು ದನಕರಗಳನ್ನು ಕಟ್ಟಿ ಕೊಂಡವರಿಗೆ ಸರ್ಕಾರ ದಿಂದ ಅನುದಾನ ಬಿಡುಗಡೆ ಮಾಡಿಸಿ ಮೇವು ನೀರು ದೊರಕಿಸಿ ಕೊಟ್ಟಂತಹ ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತು ಬಿಜಿಕೆರೆ ಪಕ್ಕದ ಮುತ್ತಿಗೆರಹಳ್ಳಿನಲ್ಲಿ ಗೋ ಶಾಲೆ ರೂಪಿಸಿದಂತ ಶಾಸಕರು ಬಿಸಿಲಿನ ದಗೆ ದಿನ ದಿನ ಹೆಚ್ಚುತಲೆ ಇದೆ ಈ ತಾಲೂಕು ಬರೇ ಗುಡ್ಡಗಾಡು ಬಂಡೆ ನೋಡುವಂತ ತಾಲೂಕು ಆಗಿದೆ ಅದಕ್ಕಾಗಿ ಮಾತನಾಡುವ ಮನುಷ್ಯ ಎಲ್ಲಾದರೂ ಬದುಕಬಹುದು ಆದರೆ ಬಾಯಿ ಇಲ್ಲದ ಬಸವಣ್ಣ ಪ್ರಾಣಿ ಪಕ್ಷಿಗಳು ಯಾರನ್ನ ಕೇಳಿ ಆಹಾರ ನೀರು ಸೇವಿಸಬೇಕು ಎಂಬುದು ಹರಿಯದಂತಾಗಿದೆ.

ಆದರೆ ಮೊಳಕಾಲ್ಮುರು ಕ್ಷೇತ್ರದ ಶಾಸಕರು ಇಂತಹ ಗೋ ಶಾಲೆ ನಿರ್ಮಾಣ ಮಾಡಿ ಬರದ ಭವಣೆ ನೀಗಿಸಿದಂತ ಶಾಸಕರು ದನಕರುಗಳಿಗೆ ನೀರು ಆಹಾರ ಮೇವು ಈ ಒದಗಿಸಿ ಕೊಟ್ಟು ಕೋಟಿ ಪುಣ್ಯವು ಪಡೆದು ಕೊಂಡಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಇವರು ಅಂದು ಕೊಂಡಂತ ಕೆಲಸಗಳು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸಗಳು ಮಾಡುತ್ತಾರೆ ಮಾನ್ಯ ಶಾಸಕರು ಈ ಸಂದರ್ಭದಲ್ಲಿ ತಹಸಿಲ್ದಾರ್ರಾದ ಶಂಕ್ರಪ್ಪ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ನಾಗನಗೌಡ ತಾಲೂಕಾ ಪಂಚಾಯತಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಅಧ್ಯಕ್ಷರುಗಳು ಹಾಗೂ ತಾಲೂಕಿನ ಎಲ್ಲಾ ಜನ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button