ಬಯಲು ತುಂಬರಗುದ್ದಿ ಗ್ರಾಮದ ಶ್ರೀ ನಂದೀಶ್ವರ ಸ್ವಾಮಿಯ ರಥೋತ್ಸವ.

ಹೊಸಹಳ್ಳಿ ಮಾರ್ಚ್.12

ಕಾನಹೊಸಹಳ್ಳಿ ಸಮೀಪದ ಬಯಲು ತುಂಬರಗುದ್ದಿ ಗ್ರಾಮದ ಶ್ರೀನಂದೀಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಂಜೆ ಸಂಭ್ರಮ, ಸಡಗರಗಳ ನಡುವೆ ನೆರವೇರಿತು.ರಥೋತ್ಸವದ ಹಿನ್ನಲ್ಲೆಯಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ನಂದೀಶ್ವರ ಸ್ವಾಮಿಗೆ ಅಲಂಕಾರ ಮಾಡಿ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂದೀಶ್ವರ ಸ್ವಾಮಿಯನ್ನು ಸಕಲ ವಾಧ್ಯಗಳೊಂದಿಗೆ ಪಲಕ್ಕಿಯಲ್ಲಿ ರಥದ ಬಳಿ ಕರೆತಂದು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಿಲಾಯಿತು.’ಶ್ರೀ ನಂದೀಶ್ವರ ದೊರೆಯ, ನಿನಾಗಾರು ಸರಿಯೆ ಸರಿ ಸರಿ ಎಂದವರ ಹಲ್ಲು ಮುರಿಯೆ ಬಹು ಪರಾಕ್’ ಎಂದು ನೆರದಿದ್ದ ಭಕ್ತರು ಜಯಘೋಷ ಹಾಕಿದರು, ರಥ ಮುಂದೆ ಸಾಗುತ್ತಿದ್ದಂತೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಕೆಂಚಪ್ಪಗಳ ವೀರೇಶ್ ₹51101ಕ್ಕೆ ಪಟಾಕ್ಷಿ ಪಡೆದು ಕೊಂಡರು.ರಥವು ಪಾದಗಟ್ಟೆಯವರೆಗೂ ತಲುಪಿ ಪುನಃ ಮೂಲಸ್ಥಳ ತಲುಪಿತು, ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ಕೆ ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button