ಪೊಳ್ಳು ಭರವಸೆ ಸುಳ್ಳು ಹೇಳುವವರ ಮಾತಿಗೆ ಮರುಳಾಗದಿರಿ-ಎಸ್ ಭೀಮನಾಯಕ ಕೆಎಂಎಫ್ ರಾಜ್ಯಾಧ್ಯಕ್ಷರು.
ಗಾಣಗಟ್ಟೆ ಮಾರ್ಚ್.14

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಾಣಗಟ್ಟೆ ಗ್ರಾಮದಲ್ಲಿ ದಿನಾಂಕ 13 ಮಾರ್ಚ್ 2024 ಬುಧವಾರ ದಂದು ರಾ /ಬ /ಕೊ /ಹಾಗೂ ವಿಜಯನಗರ ಜಿಲ್ಲಾ ಒಕ್ಕೂಟದ ಚುನಾವಣೆ ಪೂರ್ವ ಭಾವಿ ಸಭೆ ಜರುಗಿತು ಈ ಸಂದರ್ಭದಲ್ಲಿ ಮಾತನಾಡಿ ದ ಕೆ. ಎಂ. ಎಫ್. ರಾಜ್ಯ ಅಧ್ಯಕ್ಷರಾದ ಎಸ್ ಭೀಮನಾಯ್ಕ ಅವರು ಮಾತನಾಡಿ ಇದೆ ತಿಂಗಳು ನಮ್ಮ ಒಕ್ಕೂಟದ ಚುನಾವಣೆ ಜರುಗುವ ಸಾಧ್ಯತೆ ಇದ್ದು ಎಲ್ಲರೂ ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸೋಣ ಎಂದರು ನಮ್ನ ಒಕ್ಕೂಟದಲ್ಲಿ ಈಗಿರುವ 4 ಸ್ಥಾನ ಬದಲಾಗಿ 6 ಸ್ಥಾನ ಸಿಗುವ ಬಗ್ಗೆ ಮಾಹಿತಿಯನ್ನು ನೀಡಿದರು. ನಾನು ಒಕ್ಕೂಟದ ಅಧ್ಯಕ್ಷರು ಆಗಿದ್ದು ಇದುವರೆಗೂ ಕೂಡ ನಮ್ನ ಭಾಗದ ತಾಲೂಕಿಗೆ ಸಿಗಬೇಕಾದ ಮಾನ್ಯತೆ ಸರಿಯಾಗಿ ಸಿಗುತ್ತಿರಲಿಲ್ಲ ನಾನು ಸಹಕಾರ ರಂಗಕ್ಕೆ ಬಂದಿದ್ದು ಅನಿವಾರ್ಯ ಆದರೇ ರಾ, ಬ. ಕೊಪ್ಪಳ ಮತ್ತು ವಿಜಯನಗರ ಒಕ್ಕೂಟ ಅಧ್ಯಕ್ಷನಾಗಿ ಬಂದ ಮೇಲೆ ಗೊತ್ತಾಯಿತು ಇಲ್ಲಿ ರೈತರ ಸಂಸ್ಥೆ ಇದರಲ್ಲಿ ಬರಲು ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಅದೇ ರೀತಿ ನಾನು ರಾಜ್ಯ ಅಧ್ಯಕ್ಷನಾಗಿ ಕೂಡ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಇಲ್ಲಿ ನೆರೆದಿರುವ ಎಲ್ಲಾರ ಆಶೀರ್ವಾದ ದಿಂದ ನಾನು ಆಗಿರುವೆ ಎಂದರು ಅದೇ ರೀತಿ ನಾನು ಯಾವುದೇ ರೀತಿಯ ಸಂಭಾವನೆ ಪಡೆದಿಲ್ಲ ಮತ್ತು ಒಕ್ಕೂಟ್ಟದಲ್ಲಿಯೂ ಕೂಡ ನಾನು ಸಂಭಾವನೆ ಪಡೆದಿಲ್ಲ ಏಕೆಂದರೆ ಇದು ರೈತರ ಬೆವರಿನ ಹನಿ ಇದನ್ನು ಅನಾವಶ್ಯಕಾವಾಗಿ ಖರ್ಚು ಮಾಡಲು ನನಗೆ ಮನಸ್ಸಿಲ್ಲ ನಾನು ರೈತರ ಪರವಾಗಿ ಕೆಲಸ ಮಾಡಲು ಬಂದಿದ್ದೇನೆ ಅದೇ ರೀತಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದೆ ಕೂಡ ನಾನು ನನ್ನ ಶಕ್ತಿ ಮೀರಿ ರೈತರಿಗೆ ಅನುಕೂಲ ಮಾಡಲು ನಿಮ್ಮನ್ನು ನಾನು ಕೇಳುತ್ತಿದ್ದೇನೆ ಮತ್ತೊಮ್ಮೆ ನನಗೆ ಮತ್ತು ನನ್ನ ತಂಡಕ್ಕೆ ಅವಕಾಶ ಕಲ್ಪಿಸಿ ಕೊಡಿ ಈಗ ಮಾಡಿರುವ ಅಭಿವೃದ್ಧಿ ಜೊತೆಗೆ ಇನ್ನೂ ಅನೇಕ ಯೋಜನೆಗಳು ಜಾರಿ ಮಾಡುವುದರ ಜೊತೆಗೆ ನಮ್ಮ ರೈತರಿಗೆ ಅನುಕೂಲ ವಾಗುವ ಯೋಜನೆ ತರಬೇಕು ಈಗಾಗಲೇ ಹೊಸಪೇಟೆಯಲ್ಲಿ ಪಶು ಆಹಾರ ಘಟಕ ಕೇಂದ್ರ ಮತ್ತು ಇನ್ನೂ ಮುಂದೆ ನಂದಿನಿ ಉತ್ಪನ್ನ ಘಟಕ ನಂದಿನಿ ನೀರಿನ ತಯಾರಿಕಾ ಘಟಕ ಇನ್ನೂ ಅನೇಕ ಯೋಜನೆಗಳನ್ನು ಪ್ರಾರಂಭ ಮಾಡಿ ನಮ್ಮ ಸ್ಥಳೀಯ ಜನರಿಗೆ ಉದ್ಯೋಗ ಕಲ್ಪಿಸಲು ನನ್ನ ಮುಂದಿನ ಗುರಿ ಇದೆ ಹಾಗೆ ಕೂಡ್ಲಿಗಿ ಕೊಟ್ಟೂರು ಹರಪನಹಳ್ಳಿ ಹಡಗಲಿ ಹಗರಿಬೊಮ್ಮನಹಳ್ಳಿ ಹೊಸಪೇಟೆ ಹಾಲು ಉತ್ಪದಕರ ಸಹಕಾರ ಸಂಘಗಳ ಮತದಾರರಾದ ನೀವು ಎಲ್ಲರೂ ಒಗ್ಗಟ್ಟಾಗಿ ನೀವು ಯಾವುದೇ ರೀತಿಯ ಪೊಳ್ಳು ಭರವಸೆ ಮತ್ತು ಸುಳ್ಳು ಹೇಳುವವರ ಮಾತಿಗೆ ಮರುಳಾಗದೆ ನಮ್ಮ ತಂಡದ ಎಲ್ಲಾ ಸದಸ್ಯರು ಜಯಶೀಲರಾಗ ಬೇಕು ಯಾವ ಕಾರಣಕ್ಕೂ ನೀವು ಬದಲಾವಣೆ ಮಾಡದೆ 4 ಸ್ಥಾನ ಆಗಲಿ ಅಥವಾ 6 ಸ್ಥಾನ ಆಗಲಿ ನಮ್ಮ ತಂಡ ಎಲ್ಲಾರಿಗೂ ಆಶಿರ್ವಾದ ಮಾಡಿ ಎಂದರು ಎಲ್ಲರೂ ನಿಮ್ಮ ಸೇವೆ ನಮಗೆ ಅಗತ್ಯ ಬೇಕು ನಮ್ಮ ರೈತರಿಗೆ ಅನುಕೂಲ ವಾಗಬೇಕು ಹೈನುಗಾರಿಕೆ ಇನ್ನು ಉತ್ತಮ ಮಟ್ಟಕ್ಕೆ ಬೆಳೆಯಲು ನಿಮ್ಮ ಸೇವೆ ಅಗತ್ಯವಾಗಿ ಬೇಕು ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹೆಚ್.ಮರುಳಸಿದ್ದಪ್ಪ ನಿರ್ದೇಶಕರು ರಾ. ಬ. ಕೊ. ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟ ಜಿಂಕಾಲ್ ನಾಗಮಣಿ ರಾ. ಬ. ಕೊ. ವಿಜಯನಗರ ಹಾಲು ಒಕ್ಕೂಟ ಐ ಗೋಳು ಚಿದಾನಂದ ನಿರ್ದೇಶಕರು ಬಿ. ಡಿ. ಸಿ. ಸಿ.ಬ್ಯಾಂಕ್ ಹೊಸಪೇಟೆ ದ್ವಾರಕೀಶ್ ಉಪಾಧ್ಯಕ್ಷರು ಬಿ. ಡಿ. ಸಿ ಸಿ ಬ್ಯಾಂಕ್ ಹೊಸಪೇಟೆ ಮತ್ತು ವಿಜಯನಗರ ಜಿಲ್ಲಾ ಎಲ್ಲಾ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತದಾನ ಅರ್ಹತೆ ಪಡೆದಿರುವ ಎಲ್ಲಾರು ಹಾಜರಿದ್ದರು ಮತ್ತು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು