ಮೊಳಕಾಲ್ಮುರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕರು.

ಮೊಳಕಾಲ್ಮುರು ಮಾರ್ಚ್.15

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರ ಇಂದು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ಬಾಂಡ್ರಾವಿ ಗ್ರಾಮದಲ್ಲಿ ರಾಂಪುರ ಬಾಂಡ್ರಾವಿ ರಸ್ತೆ ಗೆ ಸುಮಾರು ₹ 5 ಕೋಟಿ 70 ಲಕ್ಷ ಕೋನಸಾಗರ ಗ್ರಾಮದಲ್ಲಿ ಕೋನ ಸಾಗರ ದಿಂದ ಗೌರಸಮುದ್ರ ಗ್ರಾಮಕ್ಕೆ ಹೋಗುವ ರಸ್ತೆಗೆ ₹5 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿನಾಯಕನಹಟ್ಟಿ ಪಟ್ಟಣದಲ್ಲಿನ ನಾಯಕನಹಟ್ಟಿ ಚಳ್ಳಕೆರೆ ರಸ್ತೆಯಲ್ಲಿ ನ ಬ್ರಿಡ್ಜ್ ಸರ್ವಿಸ್ ರಸ್ತೆಗೆ 50 ಲಕ್ಷ ರೂಗಳ ಭೂಮಿ ಪೂಜೆ ನೆರವೇರಿಸಲಾಯಿತು.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ನಗರ ಸ್ಥಾನ ಹಂತದ ಮೂರರಲ್ಲಿ ನಿರ್ಮಾಣವಾದ ವಾಣಿಜ್ಯ ಸಂಖ್ಯೆಯನ್ನು ಮಳಿಗೆಗಳ ಉದ್ಘಾಟನೆ.ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಹಿರೇಮಲ್ಲನಹೊಳೆ ಗ್ರಾಮದ ಬ್ಯಾರೇಜ್ ಗೇಟ್ ಹತ್ತಿರ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಹಾಗೂ ತಳಕು ಹೋಬಳಿಯ ಐದು ಕೆರೆಗಳ ನೀರು ಹರಿಸುವ ಕಾಲುವೆ ಅಭಿವೃದ್ಧಿ ಕಾಮಗಾರಿಯ ಸುಮಾರು ₹ 5 ಕೋಟಿ ಈ ಸಂದರ್ಭದಲ್ಲಿಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು, ಹಿರಿಯ ಮುಖಂಡರುಗಳು, ಅಭಿಮಾನಿಗಳು ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button