ಡಾ. ಬಾಬು ಜಗಜೀವನರಾಂ ಭವನವನ್ನು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಪಯೋಗಿಸಲು ಡಿ.ಎಚ್.ಎಸ್ ಒತ್ತಾಯ.

ಹೊಸಪೇಟೆ ಮಾರ್ಚ್.16

ಹೊಸಪೇಟೆಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ದಿನಾಂಕ 16.3.2024 ರಿಂದ ನಡೆಯಲಿದ್ದ ಪ್ರತಿಭಟನೆಯನ್ನ ಮುಂದೂಡಲಾಗಿದೆ.ದಿನಾಂಕ 27.2.2021ರಂದು ಉದ್ಘಾಟಿಸಿದ್ದ ಡಾ!! ಬಾಬು ಜಗಜೀವನರಾಮ್ ಭವನವನ್ನು ದಲಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಪಯೋಗಿಸುವ ಬದಲು ಸರಕಾರಿ ಕಛೇರಿಗಳಿಗೆ ಉಪಯೋಗಿಸುತ್ತಿರುವುದನ್ನು ಪ್ರತಿಭಟಿಸಿ ದಿನಾಂಕ 16.3.2024 ರಿಂದ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದ ದಲಿತ ಹಕ್ಕುಗಳ ಸಮಿತಿಯ (DHS)ಹೊಸಪೇಟೆ ತಾಲೂಕಿನ ಘಟಕವು, ಇಂದು ಪೂರ್ವಭಾವಿಯಾಗಿ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು. ತಾತ್ಕಾಲಿಕವಾಗಿ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಕಛೇರಿ ನಡೆಸುತ್ತಿದ್ದೇವೆ. ಈಗಾಗಲೆ ಸಮಾಜ ಕಲ್ಯಾಣ ಇಲಾಖೆಯ ಪ್ರತ್ಯೇಕ ಕಟ್ಟಡದ ಕೆಲಸ ಮುಗಿದ ನಂತರ ದಲಿತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ DHS ತನ್ನ ಪ್ರತಿಭಟನೆಯನ್ನು ಮುಂದೂಡಿದೆ.ಇಂದಿನ ಚರ್ಚೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಮಂಜುನಾಥ, ಜಿಲ್ಲಾ ಅಧ್ಯಕ್ಷರಾದ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ DSS ಮುಖಂಡರು ಎಂ.ಜಂಬಯ್ಯನಾಯಕ, ಜಿಲ್ಲಾ ಉಪಾಧ್ಯಕ್ಷರಾದ ಬಿ.ತಾಯಪ್ಪನಾಯಕ, ತಾಲೂಕು ಅಧ್ಯಕ್ಷ ಎಂ.ಧನರಾಜ್ ,ಕಾರ್ಯದರ್ಶಿಯಾದ ಬಿ.ರಮೇಶ್ ಕುಮಾರ್,ಸಂಘಟನಾ ಕಾರ್ಯದರ್ಶಿಯಾದ ಸೂರ್ಯ ನಾರಾಯಣ ಮಾದಿಗ ಮತ್ತು ಕ್ರಿಷ್ಣಪ್ಪ ಮಾಸ್ತರ್ ಭಾಗವಹಿಸಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button