ಬರ ಪೀಡಿತ ನಾಡಿಗೆ ಹಸಿರು ಕ್ರಾಂತಿಯಾಗಿ ರೈತನ ಉಸಿರು ಎಂದು ಚಿಕ್ಕ ಮಲ್ಲನವಳೆ ಚಾನೆಲ್ ನಿಂದ ಪುನಶ್ಚೇತನ ಗೊಳಿಸಿ ನೀರು ಹರಿಸಿದಂತ ಶಾಸಕರು.

ಚಿಕ್ಕ ಮಲ್ಲನವಳೆ ಮಾರ್ಚ್.16

ನಾಯಕನಹಟ್ಟಿ ಜಗಳೂರು ಬಳಿ ಇರುವ ಚಿಕ್ಕ ಮಲ್ಲನವಳೆ ಗ್ರಾಮದ ಬಳಿ ಇರುವ ಲೇಖಿಲಗೆರೆ ಪೀಡರ್ ಚಾನೆಲ್ ನಿಂದ ನೀರು ಅರಿದರೆ ಮೊಳಕಾಲ್ಮೂರು ತಾಲೂಕಿಗೆ ಐದು ಕೆರೆಗಳಿಗೆ ನೀರಿನ ಸೌಲಭ್ಯ ಬಂದಂತಾಗುತ್ತದೆ ಇದರಿಂದ ಸುಮಾರು 2,000 ಎಕರೆ ಹಸಿರು ರೈತನ ಉಸಿರು ಎಂದು ರೈತನ ಕುಟುಂಬ ಸಮೇತ ಬದುಕು ಕಟ್ಟಿಕೊಳ್ಳಲು ಸಣ್ಣ ನೀರಾವರಿ ಇಲಾಖೆಗೆ 5 ಕೋಟಿ ವೆಚ್ಚದ ಯೋಜನೆ ಕಲ್ಪಿಸಿ ಕೊಟ್ಟು ಭೂಮಿ ಪೂಜೆ ನೆರವೇರಿಸಿದರು.

ಮತ್ತು ಈ ಕಾಮಗಾರಿ ಮೂರು ತಿಂಗಳ ಒಳಗೆ ಮುಗಿಸಬೇಕು ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಬರದ ನಾಡಿಗೆ ಭಗೀರಥನಂಬ ಭಾಗ್ಯವನ್ನು ಕಲ್ಪಿಸಿ ರೈತರಿಗೆ ದನ ಕರು ಮೇಕೆ ಹಸು ಪ್ರಾಣಿ ಇವೆಲ್ಲವುಗಳಿಗೆ ನೀರಿನ ದಾಹ ನೀಗಿಸಿದಂತ ಶಾಸಕರು ಕಳೆದ 30 ವರ್ಷಗಳಿಂದಲೂ ಇಂತಹ ಚಾನಲ್ ನೆನೆಗುದಿಗೆ ಬಿದ್ದು ಇಲ್ಲಿ ಗಿಡ ಗಂಟೆ ಮರ ಬೆಳೆದು ಮುಳ್ಳುಜಾಲಿ ಬೆಳೆದು ಕಾಡಿನ ಪರಿಸ್ಥಿತಿಯಂತೆ ಕಾಣುತ್ತಿತ್ತು ಇಂತಹ ಒಂದು ಚಾನಲ್ ಅನ್ನು ಪುನಶ್ಚೇತನ ಗೊಳಿಸಿ ಮುಖ್ಯಮಂತ್ರಿಗಳ ಅನುದಾನದ ಅಡಿಯಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಂತ ಶಾಸಕರು ಇವರು ಯಾವತ್ತಿಗೂ ನ್ಯಾಯದ ಮಾರ್ಗ ಧರ್ಮದ ಮಾರ್ಗ ಅದು ಯಾವುದೇ ಕೆಲಸ ಆಗಲಿ ಶಾಶ್ವತವಾಗಿ ಎಲ್ಲಾ ಸಾರ್ವಜನಿಕರಿಗೆ ಬದುಕು ಕಟ್ಟಿಕೊಳ್ಳಲು ಕೆಲಸಗಳನ್ನು ಮಾತ್ರ ಮಾಡುತ್ತಾರೆ ಇಂತಹ ಒಬ್ಬ ಪುಣ್ಯಾತ್ಮರನ್ನು ಪಡೆದಿರುವುದು ಮೊಳಕಾಲ್ಮೂರು ಕ್ಷೇತ್ರದ ಮತದಾರರು ಪುಣ್ಯ ಎಂದು ತಿಳಿಯಬೇಕು ಏಕೆಂದರೆ ಕಷ್ಟ ಪಟ್ಟವರಿಗೆ ಕಷ್ಟದ ಕೆಲಸ ಏನು ಎಂಬುವುದು ಅರ್ಥವಾಗುತ್ತದೆ ಇವರು ಜ್ಞಾನದಿಂದ ಬೆಳೆದು ಬಂದಂತಹ ಶಾಸಕರು ಇವರು ಯಾವತ್ತಿಗೂ ಇವರ ಕುಟುಂಬ ಜ್ಞಾನ ಜ್ಯೋತಿಯಾಗಿ ಬೆಳಗುತ್ತಿದೆ ಧರ್ಮದ ಹಾದಿಯಲ್ಲಿ ಸಾಗುತ್ತಿದೆ ಇಂಥವರ ವಿರುದ್ಧ ಯಾರು ಅನ್ಯಥಾ ಬಯಸಬಾರದು ಇನ್ನು ಇವರಿಗೆ ಹೆಚ್ಚಿನ ಶಕ್ತಿ ಕೊಡಬೇಕು ಈ ಸಾರ್ವಜನಿಕರು ಇಂಥ ಶಾಸಕರಿಗೆ ಕೈಜೋಡಿಸಿದರೆ ಕ್ಷೇತ್ರಕ್ಕೆ ಅನುದಾನ ತರಲು ಯಾವುದೇ ತರಹ ಹಿಂಜರಿಯುವುದಿಲ್ಲ ಎಂದ ಮಾನ್ಯ ಶಾಸಕರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button