ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದ – ಪ್ರಕಾಶ ರಾಂಪುರ.
ಕೊಟ್ಟೂರು ಮಾರ್ಚ್.17

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಮಾರ್ಚ್. 17-2024 ರಂದು ಗಾಂಧಿ ಸರ್ಕಲ್ ತೇರು ಗಡ್ಡೆ ಹತ್ತಿರ ಡಾ.ಪುನೀತ್ ರಾಜಕುಮಾರ್ ಅವರ 49 ನೇ. ಹುಟ್ಟುಹಬ್ಬ ಹಾಗೂ ಸ್ಪೂರ್ತಿದಾಯಕ ದಿನದ ಪ್ರಯುಕ್ತ ಡಾ.ಪುನೀತ್ ರಾಜಕುಮಾರ್ ರವರ ಅಭಿಮಾನಿಯಾದ ಪ್ರಕಾಶ್ ರಾಂಪುರದ ( ಅಪ್ಪು ಬಾಸ್ ಅಭಿಮಾನಿ ಸಂಘದ ಅಧ್ಯಕ್ಷರು ಕೊಟ್ಟೂರು ) ಇವರು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ನೀರಿನ ಅರವಟ್ಟಿಗೆ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಹಾಗೂ 17 ಕೆಜಿ ಕೇಕನ್ನು ಕತ್ತರಿಸಿ ನಂತರ ಪುನೀತ್ ರಾಜಕುಮಾರ್ ಅವರಿಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕೆ ಎಮ್ ಎಮ್ ಗುರುಸ್ವಾಮಿ ಉಪಾಧ್ಯಕ್ಷರು ಹಾಗೂ ಜಿ ರಾಜು. ಎಲ್ ಕೊಟ್ರೇಶ.ಎಚ್ ವೀರೇಶ. ಐ ಮಂಜುನಾಥ. ಬಿ ಅಪ್ಪಾಜಿ. ಬಿ ಗೀರಿಷ. ಬಿ ಕೊಟ್ರೇಶ. ಜಿ ಕೊಟ್ರೇಶ ಈ ಎಲ್ಲಾ ನನ್ನ ಸ್ನೇಹಿತರ ತಂಡಕ್ಕೆ ಅಭಿನಂದನಗಳು ಪ್ರತಿ ವರ್ಷವೂ ಸಾರ್ವಜನಿಕರು ಸಹಕಾರ ಕೊಟ್ಟಂತೆ ಮುಂದೆಯೂ ಇದೇ ರೀತಿ ಡಾ.ಪುನೀತ್ ರಾಜಕುಮಾರ್ ಇವರ ಪುಣ್ಯ ಸ್ಮರಣೆ ಹಾಗೂ ಹುಟ್ಟುಹಬ್ಬ ( ಸ್ಪೂರ್ತಿ ದಿನ ) ಕ್ಕೆ ಸಹಕಾರ ಕೊಡಬೇಕೆಂದು ಪ್ರಕಾಶ್ ರಾಂಪುರದ ಇವರು ಸಾರ್ವಜನಿಕರಲ್ಲಿ ವಿನಂತಿಸಿದರು. ಡಾ.ಪುನೀತ್ ರಾಜಕುಮಾರ್ ರವರ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಸ್ಪೂರ್ತಿಯಾಗಿ ನಾನು ಕೂಡ ಅವರ ಅಭಿಮಾನಿಯಾಗಿ ಸದಾ ಅವರ ಹಾದಿಯಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ಸ್ನೇಹಿತರ ಬಳಗಕ್ಕೆ ಪ್ರಕಾಶ್ ರಾಂಪುರದ ಇವರು ತುಂಬು ಹೃದಯದಿಂದ ಅಭಿನಂದನೆಯನ್ನು ಸಲ್ಲಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು