ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದ – ಪ್ರಕಾಶ ರಾಂಪುರ.

ಕೊಟ್ಟೂರು ಮಾರ್ಚ್.17

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಮಾರ್ಚ್. 17-2024 ರಂದು ಗಾಂಧಿ ಸರ್ಕಲ್ ತೇರು ಗಡ್ಡೆ ಹತ್ತಿರ ಡಾ.ಪುನೀತ್ ರಾಜಕುಮಾರ್ ಅವರ 49 ನೇ. ಹುಟ್ಟುಹಬ್ಬ ಹಾಗೂ ಸ್ಪೂರ್ತಿದಾಯಕ ದಿನದ ಪ್ರಯುಕ್ತ ಡಾ.ಪುನೀತ್ ರಾಜಕುಮಾರ್ ರವರ ಅಭಿಮಾನಿಯಾದ ಪ್ರಕಾಶ್ ರಾಂಪುರದ ( ಅಪ್ಪು ಬಾಸ್ ಅಭಿಮಾನಿ ಸಂಘದ ಅಧ್ಯಕ್ಷರು ಕೊಟ್ಟೂರು ) ಇವರು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ನೀರಿನ ಅರವಟ್ಟಿಗೆ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಹಾಗೂ 17 ಕೆಜಿ ಕೇಕನ್ನು ಕತ್ತರಿಸಿ ನಂತರ ಪುನೀತ್ ರಾಜಕುಮಾರ್ ಅವರಿಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕೆ ಎಮ್ ಎಮ್ ಗುರುಸ್ವಾಮಿ ಉಪಾಧ್ಯಕ್ಷರು ಹಾಗೂ ಜಿ ರಾಜು. ಎಲ್ ಕೊಟ್ರೇಶ.ಎಚ್ ವೀರೇಶ. ಐ ಮಂಜುನಾಥ. ಬಿ ಅಪ್ಪಾಜಿ. ಬಿ ಗೀರಿಷ. ಬಿ ಕೊಟ್ರೇಶ. ಜಿ ಕೊಟ್ರೇಶ ಈ ಎಲ್ಲಾ ನನ್ನ ಸ್ನೇಹಿತರ ತಂಡಕ್ಕೆ ಅಭಿನಂದನಗಳು ಪ್ರತಿ ವರ್ಷವೂ ಸಾರ್ವಜನಿಕರು ಸಹಕಾರ ಕೊಟ್ಟಂತೆ ಮುಂದೆಯೂ ಇದೇ ರೀತಿ ಡಾ.ಪುನೀತ್ ರಾಜಕುಮಾರ್ ಇವರ ಪುಣ್ಯ ಸ್ಮರಣೆ ಹಾಗೂ ಹುಟ್ಟುಹಬ್ಬ ( ಸ್ಪೂರ್ತಿ ದಿನ ) ಕ್ಕೆ ಸಹಕಾರ ಕೊಡಬೇಕೆಂದು ಪ್ರಕಾಶ್ ರಾಂಪುರದ ಇವರು ಸಾರ್ವಜನಿಕರಲ್ಲಿ ವಿನಂತಿಸಿದರು. ಡಾ.ಪುನೀತ್ ರಾಜಕುಮಾರ್ ರವರ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಸ್ಪೂರ್ತಿಯಾಗಿ ನಾನು ಕೂಡ ಅವರ ಅಭಿಮಾನಿಯಾಗಿ ಸದಾ ಅವರ ಹಾದಿಯಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ಸ್ನೇಹಿತರ ಬಳಗಕ್ಕೆ ಪ್ರಕಾಶ್ ರಾಂಪುರದ ಇವರು ತುಂಬು ಹೃದಯದಿಂದ ಅಭಿನಂದನೆಯನ್ನು ಸಲ್ಲಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button