ಶಾಲೆಗೆ ಹೋಗದ ಇರುವ ಪಾಂಡುರಂಗ ಸ್ವಾಮಿಯ ಸೇವಕರು. ಉತ್ತಮ ವಚನ ಬೋಧಕರು – ಎಸ್. ದುರಗೇಶ್.

ಕೂಡ್ಲಿಗಿ ನವೆಂಬರ್.8

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ನಗರದಲ್ಲಿ ಭಾನುವಾರ ರಂದು ಪಾಂಡುರಂಗ ಸ್ವಾಮಿ ಬಳಗ ದಿಂದ ಎರಡನೇ ವರ್ಷದ ದಂಡಿ ಯಾತ್ರೆಯ ಸ್ವಾಮಿಭಕ್ತಿಯನ್ನು ಅರಿತು ಕೊಂಡು ಸಾವಿರಾರು ಕಿಲೋ ಮೀಟರ್ ಗಳಷ್ಟು ಮಕ್ಕಳು ಮಹಿಳೆಯರು ಐವತ್ತು ವರ್ಷಗಳು ಕಳೆದ ಹಿರಿಯ ವೃದ್ಧ ರು ವಯಸ್ಸನ್ನು ಲೆಕ್ಕಿಸದೆ ಪಾಂಡುರಂಗ ಸ್ವಾಮಿಯ ಭಕ್ತಿ ಗೀತೆಗಳನ್ನು ಭಜನೆ ಮಾಡುತ ಪಾದಯಾತ್ರೆ ಮೂಲಕ ಪಂಡರಾಪುರಕ್ಕೆ ಸ್ವಾಮಿಯ ಪಾದ ದರ್ಶನಕ್ಕೆ ಮುಂದೆ ಸಾಗುವ ಪಾಂಡುರಂಗನಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಕೂಡ್ಲಿಗಿಯ ಅಂಬೇಡ್ಕರ್ ನಗರದಲ್ಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ನಗರದ ಪಾಂಡುರಂಗ ಭಕ್ತಾದಿಗಳು ಪಾದಯಾತ್ರೆ ಮೂಲಕ ಆಗಮಿಸಿದಂತಹ ಹಿರಿಯ ಪಾಂಡುರಂಗ ಸ್ವಾಮಿಯ ಭಕ್ತಿಯ ಸೇವಕರು ಅಂಬೇಡ್ಕರ್ ನಗರದಲ್ಲಿ ಹಲವಾರು ಯುವಕರುಗಳು ಹಿರಿಯರು ತಮಗೆ ಗೊತ್ತಿಲ್ಲದೆ ಮಾಡಿದಂತ ತಪ್ಪುಗಳ ದುಶ್ಚಟಗಳು ಪಾಪಗಳನ್ನು ದೇವರು ಕ್ಷಮಿಸುತ್ತಾನೆ ಎಂಬ ಮಹದಾಸೆ ನಂಬಿಕೆಯನ್ನು ಇಟ್ಟುಕೊಂಡು ಪಾಂಡುರಂಗ ಸ್ವಾಮಿಯ ಪಾದಗಳಿಗೆ ಒಪ್ಪಿಸಿ ನಾವು ಜೀವಿಸುವಂತಹ ದಿನಗಳನ್ನು ದೇವರ ಧ್ಯಾನ ಸ್ಮರಣೆಯಲ್ಲಿ ಕಳೆಯಲು ಪಾಂಡುರಂಗ ಮಾಲೆಯನ್ನು ಹಾಕಿಸಿ ಕೊಂಡಂತಹ ಯುವಕರುಗಳು ಮಹಿಳೆಯರು ಹಿರಿಯ ವ್ರುದ್ಧರು ಅಂಬೇಡ್ಕರ್ ನಗರದ ಭವನದಲ್ಲಿ ಕೆಲವು ಗಂಟೆಗಳ ಸಮಯವನ್ನು ಕಳೆದು ವರ್ಷಕ್ಕೊಮ್ಮೆ ನಡೆಯುವ ದಿಂಡಿಯಾತ್ರೆ ಕುರಿತು ಪ್ರವಚನವನ್ನು ನೀಡಿದರು.ಪಾಂಡುರಂಗ ಸ್ವಾಮಿಯ ಹಿರಿಯ ಸೇವಕರು ಮಲ್ಲಿಕಾರ್ಜುನ್ ಹಾಗೂ ಇತರರು ಪ್ರವಚನವನ್ನು ನೀಡುವುದರೊಂದಿಗೆ ಅನೇಕ ಯುವಕರುಗಳು ಮದ್ಯ ವ್ಯಸನಕ್ಕೆ ಒಳಗಾಗಿರುವ ವ್ಯಕ್ತಿಗಳಿಗೆ ದೇವರ ಮೇಲಿನ ನಂಬಿಕೆಯ ಭಕ್ತಿಯನ್ನು ಅರ್ಥ ಪೂರ್ಣವಾಗಿ ನೆರೆದಂತ ಎಲ್ಲಾ ಮಹಿಳೆಯರಿಗೆ ಯುವಕರಿಗೂ ಸಭೆಯ ಮೂಲಕ ತಿಳಿಸಿದರು.

ಹಾಗೆ ಈ ಸಂದರ್ಭದಲ್ಲಿ ಹೇಳುವಂತಹ ಮಾತುಗಳನ್ನು ಕೇಳಿದ ಎಸ್ ದುರ್ಗೇಶ್ ದಲಿತ ಮುಖಂಡರು ಇವರು ಪಾಂಡುರಂಗ ಸ್ವಾಮಿಯ ಸೇವಕರುಗಳಾದ ಮಲ್ಲಿಕಾರ್ಜುನ್ ಹಾಗೂ ಇತರರು ಗುರುಗಳ ಕುರಿತು ಮಾತನಾಡುತ್ತಾ ಈ ಪಾಂಡುರಂಗ ಭಕ್ತಾದಿಗಳು ಯಾವುದೇ ವಿದ್ಯಾಭ್ಯಾಸದ ಪದವಿಯನ್ನು ಪಡೆಯದೆ ಹಾಗೂ ಚಿಕ್ಕವರಿಂದಲೇ ಶಾಲೆಗೆ ಸಹ ಹೋಗದೇ ಇರುವಂತಹ ವ್ಯಕ್ತಿಗಳು ಪಾಂಡುರಂಗ ಸೇವೆ ಮಾಡುತ್ತಿರುವಂತಹ ವ್ಯಕ್ತಿಗಳ ಬಾಯಿಯಲ್ಲಿ ಮಾನವನ ಜೀವನಕ್ಕೆ ಬೇಕಾಗುವಂತಹ ಸ್ಪಷ್ಟವಾದ ಕೀರ್ತನೆಗಳು ಮತ್ತು ಪ್ರವಚನಗಳನ್ನು ಜನರಿಗೆ ಅರಿವು ಮೂಡುವಂತೆ ತಿಳಿಸುವುದು ಕುರಿತು ಆಶ್ಚರ್ಯಪಟ್ಟರು ಹಾಗೆ ಪಾಂಡುರಂಗ ಬಳಗವು ಕೈಗೊಂಡಿರುವ ದಿಂಡಿ ಯಾತ್ರೆಗೆ ಹೋಗುತ್ತಿರುವಂತವರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ದಲಿತ ಕೇರಿಯ ಪೊಲೀಸ್ ಪೆದೆ ಬಿ. ರಾಘವೇಂದ್ರ ಇವರು ದಿಂಡಿ ಯಾತ್ರೆಗೆ ಹೊರಡುವಂತಹವರ ಕುರಿತು ಮಾತನಾಡುತ್ತಾ ತಮ್ಮ ಬಾಲ್ಯ ವ್ಯವಸ್ಥೆಯ ದಿನಗಳಿಂದ ಕಣ್ಣಾರೆ ಕಂಡಿರುವಂತಹ ಎಷ್ಟೋ ವ್ಯಕ್ತಿ ಗಳು ಮದ್ಯಪಾನ ದುಶ್ಚಟಕ್ಕೆ ಒಳಗಾಗಿರುವಂತಹ ಯುವಕರು ಬದಲಾವಣೆ ಕಡೆ ಪಾಂಡುರಂಗ ಸ್ವಾಮಿ ದೇವರ ಮೇಲೆ ನಂಬಿಕೆಯನ್ನು ಇಟ್ಟು ತಮ್ಮ ತಪ್ಪುಗಳ ಅರಿವನ್ನು ಅರಿತು ಕೊಂಡು ಉತ್ತಮ ವ್ಯಕ್ತಿಯಾಗಲಿಕ್ಕೆ ತನ್ನ ಜೀವನವನ್ನು ಬದಲಾವಣೆಯತ್ತ ಕಂಡುಕೊಳ್ಳುವುದನ್ನ ಅರಿತಿರುವ ಕುರಿತು ತಮ್ಮ ಹನಿಸಿಕೆ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಪಾಂಡುರಂಗ ಭಕ್ತ ರಾದ ತಳವಾರ್ ಭರ್ಮಪ್ಪ, ಮರಿಸ್ವಾಮಿ, ಮೇಸ್ತ್ರಿ ಪರಶುರಾಮ, ಮಂಜುನಾಥ, ದುರ್ಗಪ್ಪ, ಚೌಡೇಶ, ಮಹೇಶ, ಟಕಾರಿ ದುರ್ಗೇಶ, ಮಹಿಳೆಯರಾದ ಬರ್ಮವ್ವ, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button