ಕಾರಜೋಳ ಮತ್ತು ಜಿಗಜಿಣಗಿ ಯವರು ಡೋಂಗಿ ರಾಜಕಾರಣ ಬಿಡಲಿ – ಪಡಗಾನೂರ.

ಇಂಡಿ ಡಿಸೆಂಬರ್.28

ದಿನಾಂಕ: 24-12-2023 ರಂದು ವಿಜಯಪುರದಲ್ಲಿ ನಡೆದ ಮಾದಿಗರ ಆತ್ಮ ಸಮಾವೇಶ, ಅಲ್ಲ, ಅದು ಜಿಗಜಿಣಗಿ ಮತ್ತು ಕಾರಜೋಳ ಅವರ ಪ್ರತಿಷ್ಟೆ ಸಮಾವೇಶ ಎಂದು ಕರ್ನಾಟಕ ರಾಜ್ಯ ಗಡಿನಾಡು ಮಾದಿಗರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಜು ಪಡಗಾನೂರ (ಸಾಲೋಟಗಿ) ಆರೋಪಿಸಿದ್ದಾರೆ.ನಿಜವಾದ ಮಾದಿಗರ ಮೇಲೆ ಆತ್ಮ ಗೌರವವಿದ್ದರೆ ತಮ್ಮದೇ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು, ಮತ್ತು ಕೇಂದ್ರದಲ್ಲಿ ಈಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ ಮಾದಿಗರ ಬಹು ದಿನದ ಬೇಡಿಕೆ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಆತ್ಮಗೌರವ ಎಲ್ಲಿ ಹೋಗಿತ್ತು? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗೋವಿಂದ ಕಾರಜೋಳ ಅವರು, ಡಿ.ಸಿ.ಎಂ ಆಗಿದ್ದರು. ಅಂತಹ ಅಧಿಕಾರ ಅವಧಿಯಲ್ಲಿ ಒಳ ಮೀಸಲಾತಿ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ಇಂತಹ ಡೋಂಗಿ ಬೆಂಬಲಿಗರ ಸಮಾವೇಶ ಮಾಡುವುದನ್ನು ನಿಲ್ಲಿಸಲಿ ಹಾಲಿ ಸಂಸದರು ಕೇಂದ್ರ ಸಚಿವರಿದ್ದಾಗ ಆತ್ಮ ಗೌರವ ಎಲ್ಲಿ ಹೋಗಿತ್ತು, ಮುಗ್ಧ ಮಾದಿಗ ಜನಾಂಗಕ್ಕೆ ಮಾದಿಗ ರಿಂದಲೇ ಶೋಷಣೆ ಯಾಗಿದೆ ಎಂದು ರಾಜು ಪಡಗಾನೂರ ಗಂಭೀರ ಆರೋಪ ಮಾಡಿದ್ದಾರೆ. ನಾನು1996 ರಿಂದ ಮೂಲ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯ ಕರ್ತನಾಗಿದ್ದು, ಈ ಸಲ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ಬಯಸಿದ್ದು ಒಂದು ವೇಳೆ ಬಿಜೆಪಿ ಹೈಕಮಾಂಡ ನನಗೆ ಟಿಕೇಟ್ ನೀಡದೆ ಹೋದಲ್ಲಿ ಕಾರಜೋಳ ಅಥವಾ ಜಿಗಜಿಣಗಿ ಅವರ ವಿರುದ್ಧ ಭಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಸಿದ್ಧ.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button